ಕಡಗಂಚಿ: ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಇಂದು ಕಲಬುರಗಿ ಹೊರವಲಯದ ನಾಗನಹಳ್ಳಿ ರಸ್ತೆ, ಜೆಮ್ ಶೆಟ್ಟಿ ನಗರದಲ್ಲಿ ಇರುವ ಶ್ರೀಯಾನ್ ಕಿವುಡ ಮತ್ತು ಮೂಕ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ನೀಡಿದರು.
ಸುಮಾರು 75 ಬಡ ಕುಟುಂಬದಲ್ಲಿ ಜನಿಸಿರುವ ಈ ಮಕ್ಕಳನ್ನು ಶ್ರೀಯಾನ್ ಸಂಸ್ಥೆ ಉಚಿತವಾಗಿ ಊಟ,ವಸತಿ ಮತ್ತು ವಿದ್ಯಾಭ್ಯಾಸವನ್ನು ನೀಡುತ್ತದೆ.
ಕಿವುಡುತನ ಮತ್ತು ಮೂಕತನ ಇದ್ದರೂ ಈ ಮಕ್ಕಳು ಇತರ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಈ ಮಕ್ಕಳ ಪ್ರತಿಭೆಯನ್ನು ನೋಡಿ ಕಲಿಯಬೇಕು. ಆದರೆ ಇಷ್ಟು ಮಕ್ಕಳಿಗೆ ಪ್ರತಿ ದಿನ ಊಟ,ಬಟ್ಟೆ, ಕಲಿಕೆಯ ಸಾಮಾಗ್ರಿಗಳು, ಇನ್ನಿತರ ಸೌಲಭ್ಯಗಳನ್ನು ಒದಗಿಸುವುದು ಕಷ್ಟಕರ. ಈ ನಿಟ್ಟಿನಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಕಳೆದ ಒಂದು ವರ್ಷದಿಂದ ಈ ಮಕ್ಕಳಿಗೆ ವಿವರಣೆ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದೆ.
ಇವತ್ತು ಅಕ್ಕಿ, ಬೇಳೆ,ಗೋದಿಹಿಟ್ಟು,ಸಕ್ಕರೆ, ಬೆಲ್ಲ, ಟೀ ಪುಡಿ, ಎಣ್ಣೆ, ಉಪ್ಪು, ತರಕಾರಿಗಳನ್ನು ನೀಡುವ ಮೂಲಕ ಮಾನವೀಯತೆಯನ್ನು ತೋರಿಸಿದೆ. ಈ ಸಂದರ್ಭದಲ್ಲಿ ಶ್ರೀಯಾನ್ ಸಂಸ್ಥೆಯ ಮುಖ್ಯಸ್ಥ ಶ್ರೀ ರಾಜು, ಸಿಬ್ಬಂದಿ, ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ನ ನಿರ್ದೇಶಕ ಫಾ. ವಿಲಿಯಂ ಮಿರಾಂದ, ಮಂಜುನಾಥ್ ಉಪಸ್ಥಿತರಿದ್ದರು.
- Carmel Jyothi Public Charitable Trust
- Charity
- Food Donation
- Fr William Miranda
- haranahalli
- Humanity
- Kalaburagi
- Naganahalli Road
- Shriyan Deaf and Dumb Children Home
- Sirisuddi
- ಆಹಾರ ಪದಾರ್ಥಗಳ ಕೊಡುಗೆ
- ಕಲಬುರಗಿ
- ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್
- ದಾನ
- ನಾಗನಹಳ್ಳಿ ರಸ್ತೆ
- ಫಾ ವಿಲಿಯಂ ಮಿರಾಂದ
- ಮಾನವೀಯತೆ
- ಶ್ರೀಯಾನ್ ಕಿವುಡ ಮತ್ತು ಮೂಕ ಮಕ್ಕಳ ಶಾಲೆ
Leave a comment