ವಿಜಯನಗರ:
ಹಂಪಿ ಉತ್ಸವದಲ್ಲಿ ಭಾನುವಾರ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಪಾಲ್ಗೊಂಡು ಅಭಿಮಾನಿಗಳನ್ನು ರಂಜಿಸಿದರು.
ಎಂ.ಪಿ ಪ್ರಕಾಶ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಧನಂಜಯ್ ವೇದಿಕೆ ಮೇಲೆ ಬಡವ ರಾಸ್ಕಲ್ ಸಿನಿಮಾ ಗೀತೆ ಸಹ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು.
ನಂತರ ಮಾತನಾಡಿದ ಡಾಲಿ ಧನಂಜಯ್ ಈ ಬಾರಿಯ ಶಿವರಾತ್ರಿಯನ್ನು ಹಂಪಿಯಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ. ಜನರ ಕೇಕೆ, ಶಿಳ್ಳೇ, ಚಪ್ಪಾಳೆಯಲ್ಲಿ ಕಲಾವಿದರಾದ ನಮಗೆ ಶಿವ ಕಾಣುತ್ತಾನೆ. ಕೆಲಸದಲ್ಲಿಯೇ ನಾನು ಶಿವನನ್ನು ಕಾಣುತ್ತೆನೆ. ಕಾಲಾಂತರದಲ್ಲಿ ಪ್ರಯಾಣ ಮಾಡುವ ಅವಕಾಶ ಸಿಕ್ಕರೆ, ಸಮಯದಲ್ಲಿ ಹಿಂದೆ ಹೋಗಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಣ್ಣು ತುಂಬಿಕೊಳ್ಳಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಹೇಳಿದರು.
‘ಬೆಳಸಿದ್ದಲ್ಲಾ, ಬೆಳದಿದ್ದು, ನುಗ್ಗಿದ್ದು ನಾವು, ಹೊಡೆದಿದ್ದು ನಾವು’ ಎಂಬ ಟಗರು ಚಲನಚಿತ್ರದ ಪ್ರಸಿದ್ದ ಸಂಭಾಷಣೆಯನ್ನು ಧನಂಜಯ್ ಹೇಳುತ್ತಿದಂತೆ ಜನರ ಹರ್ಷೋದ್ಗಾರ ಮೊಳಗಿತು. ‘ನಿಯತ್ತಾಗಿ ಬಾಳುವ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ, ಬಡವರ ಮಕ್ಕಳು ಬೆಳೆಯಬೇಕು’ ಎಂದು ಡಾಲಿ ಧನಂಜಯ ತಮ್ಮ ನಿಲುವನ್ನು ಪುನರುಚ್ಛರಿಸಿದರು.
ಬ್ರಿಟೀಷರ ವಿರುದ್ಧ ಹೋರಾಡಿದ ಹಲಗಲಿ ಬೇಡರ ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸೃಜನಶೀಲ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡುವ ಅವಕಾಶ ಲಭಿಸಿದೆ. ಉತ್ತಮ ಸಿನಿಮಾಗಳ ಮೂಲಕ ಜನರ ಮುಂದೆ ಬರುವುದಾಗಿ ಡಾಲಿ ಧನಂಜಯ್ ಹೇಳಿದರು. ಈ ವೇಳೆ ಜಿಲ್ಲಾಡಳಿತದ ವತಿಯಿಂದ ಧನಂಜಯ್ ಅವರನ್ನು ಸನ್ಮಾನಿಸಲಾಯಿತು.
ಹಂಪಿ ಉತ್ಸವದಲ್ಲಿ ಡಾಲಿ ಧನಂಜಯ್ ಘರ್ಜನೆ : ಜನರ ಕೇಕೆ ಹಾಗೂ ಶಿಳ್ಳೆಯಲ್ಲೇ ಶಿವ ಕಾಣುತ್ತಾನೆ
Leave a Comment
Leave a Comment
