ದಾವಣಗೆರೆ : ಹಲವಾರು ವರ್ಷಗಳಿಂದ ಕನ್ನಡ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಸಮರ ಸೇನೆಯು ಕನ್ನಡ ನಾಡು ನುಡಿಯ ಸೇವೆಗೆ ಸದಾ ಮುಂಚೂಣಿಯಲ್ಲಿದೆ. ಸಂಘಟನೆ ಕಾರ್ಯಕ್ರಮಗಳನ್ನು ಇನ್ನೂ ಚುರುಕುಗೊಳಿಸುವ ಹಾಗೂ ರಾಜ್ಯಾದ್ಯಂತ ಪರಿಣಾಮ ಕಾರಿಯಾಗಿ ವಿಸ್ತರಿಸುವ ಉದ್ದೇಶದಿಂದ ರಾಜ್ಯ ಘಟಕವನ್ನು ಪುನರ್ರ್ಅಚನೆ ಮಾಡಲಾಗಿದೆ” ಎಂದು ಕರ್ನಾಟಕ ಸಮರ ಸೇನೆಯ ಸಂಸ್ಥಾಪಕ ಕಾರ್ಯಧ್ಯಕ್ಷ ಬಿ ವಾಸುದೇವ ತಿಳಿಸಿದರು.
ದಾವಣಗೆರೆಯಲ್ಲಿ ಹಲವರನ್ನು ಸಂಘಟನೆಗೆ ಬರಮಾಡಿಕೊಳ್ಳುವ ಮೂಲಕ ಮಾತನಾಡಿದ ಅವರು,”ಕರ್ನಾಟಕ ಸಮರ ಸೇನೆಯ ರಾಜ್ಯ ಘಟಕವನ್ನು ಮರು ರಚನೆ ಮಾಡಲಾಗಿದ್ದು ಈ ಹಿಂದೆ ಕಾರ್ಯ ನಿರ್ವಹಿಸಿದ ಹಲವು ಪದಾಧಿಕಾರಿಗಳು ಸೇರಿದಂತೆ ರಾಜ್ಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ಉದ್ದೇಶದಿಂದ ಹೊಸಬರು ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪುನರ್ರ್ಅಚನೆ ಮಾಡಲಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಆರ್ ಶಂಕರ್, ರಾಜ್ಯ ಮಹಿಳಾ ಘಟಕ ಅಧ್ಯಕ್ಷರಾಗಿ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ಮುಂದುವರೆದಿದ್ದಾರೆ. ರಾಜ್ಯ ಉಪಾಧ್ಯಕ್ಷರಾಗಿ ಪತ್ರಕರ್ತ ಎಚ್.ಎನ್. ಪ್ರಕಾಶ್, ಸೈಯದ್ ರಿಯಾಜ್,ವೈಭಾಗ್ಯದೇವಿ, ಶಿವಪುತ್ರಪ್ಪ ಪಾಟೀಲ್, ಆರ್ ಅಬ್ದುಲ್ ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಚಿಕ್ಕಂದವಾಡಿ, ರಾಜ್ಯ ಕಾರ್ಯದರ್ಶಿಗಳಾಗಿ ಬಿ ರೇವಣಸಿದ್ದಪ್ಪ, ಅಲ್ಲಾಭಕ್ಷಿ, ಬೀಬಿ ಹಾಜಿರ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಜಮಾಲುದ್ದೀನ್ ಮೂಲಿಮನಿ,ಗಿರೀಶ್ ಎನ್ ಹೆಗಡೆ, ವೀರಯ್ಯ ಸ್ವಾಮಿ,ಪ್ರಕಾಶ್ ಹರಿಹರ, ಕಾರ್ಯ ನಿರ್ವಹಿಸಲಿದ್ದಾರೆ. ಕರ್ನಾಟಕ ಸಮರ ಸೇನೆಯ ನಿರ್ದೇಶಕ,ಕಾನೂನು ಸಲಹೆಗಾರರಾಗಿರಾಗಿ ವಕೀಲ ನಾಗರಾಜ್ ಹಲವಾಗಲು, ನಿರ್ದೇಶಕರಾಗಿ ಅಹಮದ್ ಶರೀಫ್, ಮಂಜುಳಾ ಬೆಣ್ಣಿ, ಸುನಂದಾ ಸುಂಕದಕಟ್ಟಿ ಹಾಗೂ ಸೈಯದ್ ಫಾಜಿಲ್ ಅವರನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.
Leave a comment