ಹರಪನಹಳ್ಳಿ: ತಾಲ್ಲೂಕಿನ ತೆಲಿಗಿ ಹೋಬಳಿಯ ಯರಬಾಳು ಗ್ರಾಮದ ರೈತರೊಬ್ಬರ ತೋಟದಲ್ಲಿ ಸುಮಾರು 20 ವರ್ಷಗಳಿಂದ ಬೆಳೆಸಲಾಗಿದ್ದ ಬೃಹತ್ ಶ್ರೀಗಂಧದ ಮರವನ್ನು ಭಾನುವಾರ ತಡರಾತ್ರಿ ಕಳ್ಳರು ಕತ್ತರಿಸಿಕೊಂಡು ಹೋಗಿರುವ ಘಟನೆ ಜರುಗಿದೆ.
ಗ್ರಾಮದ ಪ್ರಗತಿಪರ ರೈತ ಗುರುಸಿದ್ದಪ್ಪ ಕಂಪ್ಲಿ ಎಂಬುವವರಿಗೆ ಸೇರಿದ ತೋಟದಲ್ಲಿ ಈ ಕಳವು ನಡೆದಿದೆ. ರೈತ ಗುರುಸಿದ್ದಪ್ಪ ಅವರು ತಮ್ಮ ತೋಟದಲ್ಲಿ ನೈಸರ್ಗಿಕವಾಗಿ ಹಾಗೂ ಪರಿಸರ ಸ್ನೇಹಿಯಾಗಿ ವಿವಿಧ ಜಾತಿಯ ಗಿಡ-ಮರಗಳನ್ನು ಬೆಳೆಸಿದ್ದಾರೆ. ಇವುಗಳ ಮಧ್ಯೆ ಸುಮಾರು 20 ವರ್ಷಗಳ ಇತಿಹಾಸ ಹೊಂದಿದ್ದ 30 ಅಡಿ ಎತ್ತರದ ಬೃಹತ್ ಶ್ರೀಗಂಧದ ಮರವೂ ಇತ್ತು. ಭಾನುವಾರ ತಡರಾತ್ರಿ ತೋಟಕ್ಕೆ ನುಗ್ಗಿದ ಗಂಧದ ಕಳ್ಳರು, ಆಧುನಿಕ ಯಂತ್ರದ (ಕಟಿಂಗ್ ಮಿಷನ್) ಸಹಾಯದಿಂದ ಮರವನ್ನು ಬುಡಸಮೇತ ಕತ್ತರಿಸಿ, ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.
ಕಳ್ಳತನವಾಗಿರುವ ಶ್ರೀಗಂಧದ ಮರವು ಅಂದಾಜು 15 ಲಕ್ಷ ರೂಪಾಯಿ ಬೆಲೆ ಬಾಳುತ್ತಿತ್ತು ಎಂದು ಸಂತ್ರಸ್ತ ರೈತ ಗುರುಸಿದ್ದಪ್ಪ ಕಂಪ್ಲಿ ಅಳಲು ತೋಡಿಕೊಂಡಿದ್ದಾರೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಪನಹಳ್ಳಿ ತಾಲ್ಲೂಕು ಯರಬಾಳು ಗ್ರಾಮದ ರೈತ ಗುರುಸಿದ್ದಪ್ಪ ಕಂಪ್ಲಿ ಅವರ ತೋಟದಲ್ಲಿ ಶ್ರೀಗಂಧದ ಮರ ಕಡಿದಿರುವ ಕಳ್ಳರು. ವಿಷಯ ತಿಳಿಯುತ್ತಿದ್ದಂತೆ ಹಲವಾಗಲು ಪೊಲೀಸ್ ಠಾಣೆಯ ಎಎಸ್ಐ ಮನೋಹರ ಪಾಟೀಲ್ ಅವರು ಸಿಬ್ಬಂದಿಯೊಂದಿಗೆ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು, ತಕ್ಷಣವೇ ಪೊಲೀಸ್ ಠಾಣೆಗೆ ಬಂದು ಅಧಿಕೃತ ದೂರು ದಾಖಲಿಸುವಂತೆ ರೈತರಿಗೆ ಸೂಚಿಸಿದ್ದಾರೆ.
ಅಧಿಕಾರಿಗಳ ಮಾತು:
“ಶ್ರೀಗಂಧದ ಮರ ಕಳ್ಳತನವಾಗಿರುವ ಕುರಿತು ಸಂಬಂಧಪಟ್ಟ ರೈತರು ಪೊಲೀಸ್ ಠಾಣೆಗೆ ದೂರು ನೀಡಿ, ಎಫ್ಐಆರ್ ದಾಖಲಿಸಿದರೆ, ತಕ್ಷಣವೇ ನಮ್ಮ ಇಲಾಖೆಯ ಸಿಬ್ಬಂದಿಯನ್ನೂ ಸ್ಥಳಕ್ಕೆ ಕಳುಹಿಸಿ ಜಂಟಿ ಪರಿಶೀಲನೆ ನಡೆಸಲಾಗುವುದು. ಬಳಿಕ ಕಳ್ಳರ ಪತ್ತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಾಜು ಗೋವಂದ್ಕರ ಪ್ರತಿಕ್ರಿಯಿಸಿದ್ದಾರೆ.
Leave a comment