ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರಿ ಮುಖ್ಯಾಂಶಗಳಿಗೆ ಕಾರಣವಾಗಬಲ್ಲ ಮಹತ್ವದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕ ಡಿ.ಕೆ. ಶಿವಕುಮಾರ್ ಅವರ ಸಹಿ ಇರುವ ಪತ್ರವೊಂದು ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ.
ವೈರಲ್ ಆಗಿರುವ ಪತ್ರದ ಪ್ರಕಾರ, ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಹಾಗೂ ದಲಿತ ಸಮುದಾಯದ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಉಲ್ಲೇಖವಿದೆ. ಇವರೊಂದಿಗೆ ಒಟ್ಟು 14 ನಾಯಕರ ಹೆಸರನ್ನು ಸಚಿವರ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಯಾರಿಗೆಲ್ಲ ಸಿಗಲಿದೆ ಸಚಿವ ಸ್ಥಾನ? ಪತ್ರದಲ್ಲಿರುವ ಲಿಸ್ಟ್ ಇಲ್ಲಿದೆ:
1. ಡಿ.ಕೆ. ಶಿವಕುಮಾರ್ – ಮುಖ್ಯಮಂತ್ರಿ
2. ಡಾ. ಜಿ. ಪರಮೇಶ್ವರ್- ಉಪಮುಖ್ಯಮಂತ್ರಿ
3. ಕೆ.ಎಚ್. ಮುನಿಯಪ್ಪ – ಸಚಿವರು
4. ಕೆ.ಜೆ. ಜಾರ್ಜ್- ಸಚಿವರು
5. ಎಂ.ಬಿ. ಪಾಟೀಲ್- ಸಚಿವರು
6. ರಾಮಲಿಂಗಾರೆಡ್ಡಿ – ಸಚಿವರು
7. ಸತೀಶ್ ಜಾರಕಿಹೊಳಿ- ಸಚಿವರು
8. ಕೃಷ್ಣ ಬೈರೇಗೌಡ – ಸಚಿವರು
9. ಪ್ರಿಯಾಂಕ್ ಖರ್ಗೆ – ಸಚಿವರು
10. ಯು.ಟಿ. ಖಾದರ್- ಸಚಿವರು
11. ಈಶ್ವರ್ ಖಂಡ್ರೆ- ಸಚಿವರು
12. ಡಾ. ಯತೀಂದ್ರ ಸಿದ್ದರಾಮಯ್ಯ – ಸಚಿವರು
13. ಬೈರತಿ ಸುರೇಶ್ – ಸಚಿವರು
14. ಡಾ. ಶರಣಪ್ರಕಾಶ್ ಪಾಟೀಲ್- ಸಚಿವರು
ಹೈಕಮಾಂಡ್ನ ಸಾಮಾಜಿಕ ನ್ಯಾಯದ ಸೂತ್ರ
ಪಕ್ಷದ ಆಂತರಿಕ ಭಿನ್ನಮತ ಶಮನಗೊಳಿಸಲು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಸಾರಥ್ಯ ನೀಡಲಾಗುತ್ತಿದ್ದರೆ, ದಲಿತ ಮತಬ್ಯಾಂಕ್ ಕಾಯ್ದುಕೊಳ್ಳಲು ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಪಟ್ಟ ನೀಡಲಾಗುತ್ತಿದೆ. ಇದರೊಂದಿಗೆ ಯುವ ನಾಯಕ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರನ್ನು ಒಳಗೊಂಡ ಸಮತೋಲಿತ ಸಂಪುಟ ರಚನೆಗೆ ಕಸರತ್ತು ನಡೆದಿದೆ ಎಂಬುದು ಈ ಪತ್ರದಿಂದ ಸ್ಪಷ್ಟವಾಗುತ್ತದೆ.
Leave a comment