Home ಅಪರಾಧ ವಾಕಿಂಗ್ ಹೋಗಿದ್ದ ವ್ಯಕ್ತಿ ಅಪಹರಣ: 5 ಕೋಟಿ ಹಣಕ್ಕೆ ಬೇಡಿಕೆ
ಅಪರಾಧ

ವಾಕಿಂಗ್ ಹೋಗಿದ್ದ ವ್ಯಕ್ತಿ ಅಪಹರಣ: 5 ಕೋಟಿ ಹಣಕ್ಕೆ ಬೇಡಿಕೆ

Share
Holalu Man who went for a walk kidnapped Rs 5 crore demanded
Share

ಸಿರಿಸುದ್ದಿ.ಕಾಂ.ಹೊಳಲು: ಬೆಳಿಗ್ಗೆ ವಾಕಿಂಗ್ ಹೋಗಿದ್ದ ವ್ಯಕ್ತಿಯನ್ನು ಅಪಹರಣ ಮಾಡಿ 5ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟ ಘಟನೆ ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಮಂಜುನಾಥ ಶೇಜವಾಡಕರ್ ತಂದೆ ನಾಗೇಶ್ ಶೇಜವಾಡಕರ್ 58ವರ್ಷ ಅಪಹರಣವಾದ ವ್ಯಕ್ತಿ.

ಮಂಜುನಾಥ ಪ್ರತಿದಿನ ಬೆಳಿಗ್ಗೆ ಎದ್ದು 5.30ಕ್ಕೆ ಮೈಲಾರ ರಸ್ತೆಯಲ್ಲಿ ದೂರದ ಸಾಧನ ಶಾಲೆಯವರೆಗೂ ವಾಕಿಂಗ್ ಹೋಗಿ 6.30ಕ್ಕೆ ಬರಳಿ ಮನಗೆ ಬರುವುದು ರೂಡಿ. ಶುಕ್ರವಾರ ಬೆಳಿಗ್ಗೆೆ ಎಂದಿನಂತೆ ವಾಕಿಂಗ್ ಹೋಗಿದ್ದು, ಆದರೆ ವಾಕಿಂಗ್ ಹೋದವರು 8 ಗಂಟೆಯಾದರೂ ಮನೆಗೆ ಬಾರದಿದ್ದಾಗ ಮನೆಯಲ್ಲಿದ್ದ ಮಡದಿ ಗಾಬರಿಯಿಂದ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.

ಅಷ್ಟೊತ್ತಿಗಾಗಲೆ ಮಂಜುನಾಥ ಇವರ ಮೊಬೈಲ್ ನಿಂದ ಅಪಹರಣಕಾರರು ದಾವಣಗೆರೆಯಲ್ಲಿರುವ ವೈದ್ಯರಾದ ಮಂಜುನಾಥ ಇವರ ಹಿರಿಯ ಸಹೋದರಿ ಡಾ. ಮಂಜುಳಾ ಇವರಿಗೆ ವಾಟ್ಸಾಪ್ ಕಾಲ್‌ಮಾಡಿ ಮಂಜುನಾಥ ಇವರ ಕಡೆಯಿಂದ ಮಾತನಾಡಿಸಿದ್ದಾರೆ.

ಈ ವೇಳೆ ಮಂಜುನಾಥ ನನ್ನನ್ನು ಯಾರೋ ಕಾರಲ್ಲಿ ಅಪಹರಣ ಮಾಡಿ ಕಟ್ಟಿಹಾಕಿದ್ದಾರೆ 5 ಕೋಟಿ ಹಣ ಕೊಡಬೇಕೆಂದು ಹೇಳುತ್ತಿದ್ದಾರೆ ಎಂದು ತಿಳಿಸುತ್ತಲೆ, ಅಪಹರಣ ಕಾರ ನೇರವಾಗಿ ಮಂಜುನಾಥ ಸಹೋದರಿಯ ಹತ್ತಿರ ಮಾತನಾಡಿ ಬೇಗನೆ ಹಣ ನೀಡಿ ನಮಗೂ ಇವರಿಗೂ ಯಾವುದೇ ವಯಕ್ತಿಕ ದ್ವೇಷ ಇಲ್ಲಾ, ನಮಗೆ ಹಣ ಬೇಕು ಅಷ್ಟೆ ಎಂದಿದ್ದಾರೆ. ಅದಕ್ಕೆ ಡಾ.ಮಂಜುಳಾ ಇವರು ಪ್ರತಿಕ್ರಿಯಿಸಿ ಅಷ್ಟೊಂದು ಹಣ ನಮ್ಮಿಂದ ನೀಡಲು ಆಗುವುದಿಲ್ಲಾ ಏನು ಮಾಡುವುದು ನೀವೇ ಹೇಳಿ ಎಂದಾಗ ಅಪಹರಣ ಕಾರ ಎಷ್ಟು ನೀಡುತ್ತೀರಿ ಎಂದು ಕೇಳಿದ್ದಾನೆ.
ಅದಕ್ಕೆ ಇವರು ಒಂದು ಲಕ್ಷ ಮಾತ್ರ ನೀಡಲು ಸಾಧ್ಯ ಎಂದಾಗ ನಾವು ಕೇಳಿದಷ್ಟು ಹಣ ನೀಡದಿದ್ದರೆ ನಿಮ್ಮ ತಮ್ಮನ ಬಾಡಿ ಕೂಡಾ ಸಿಗುವುದಿಲ್ಲಾ ಎಂದು ಹೆದರಿಸಿದ್ದಾರೆ.

ಮೂಲತಃ ಬಂಗಾರ ಆಭರಣ ತಯಾರಿಕೆ ಮತ್ತು ಮಾರಾಟ ಮಾಡುತ್ತಿದ್ದ ಇವರು ಹಲವು ವರ್ಷಗಳಿಂದ ವ್ಯಾಪಾರವನ್ನು ನಿಲ್ಲಿಸಿದ್ದರು. ವಿಷಯ ತಿಳಿದ ಕೂಡಲೇ ಹಿರೇಹಡಗಲಿ ಪಿ.ಎಸ್.ಐ ಭರತ್ ಪ್ರಕಾಶ ಇವರು ಕಾರ್ಯನ್ಮುಖರಾಗಿ ಮೈಲಾರ ರಸ್ತೆಯಲ್ಲಿರುವ ಸಿ.ಸಿ ಕ್ಯಾಮೆರಗಳನ್ನು ಪರಿಶೀಲಿಸಿದರು.

ಆದರೆ ಮದ್ಯಾಹ್ನದ ವರೆಗೂ ಯಾವುದೆ ಸಾಕ್ಷಿಗಳು ದೊರೆಯಲಿಲ್ಲಾ. ಸ್ಥಳಕ್ಕೆ ಹೂವಿನಹಡಗಲಿ ಸಿಪಿಐ ದೀಪಕ್ ಭೂಸರೆಡ್ಡಿ ಬೇಟಿ ನೀಡಿ ವಿಶೇಷ ತಂಡ ರಚನೆ ಮಾಡುವ ಮೂಲಕ ತನಿಖೆ ನಡೆಸಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles
Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಅಪರಾಧ

ಪೊಲೀಸ್ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ : 4.57ಕೋಟಿ ಸ್ವತ್ತು ವಶ

ವಿಜಯನಗರ(ಹೊಸಪೇಟೆ) : 2025ರ ಜನವರಿ 1 ರಿಂದ ಜೂನ್ 30 ರವರೆಗೆ ಜಿಲ್ಲೆಯ್ಲಲಿ ಸ್ವತ್ತು ಕಳುವಾದ...

ಬಾಗಳಿಯಲ್ಲಿ ಬಾವಿಗೆ ಬಿದ್ದು ಬಾಲಕ ಸಾವು
Homeಅಪರಾಧ

ಬಾವಿಗೆ ಬಿದ್ದು ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಬಾಗಳಿ ಗ್ರಾಮದ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ ವೀಕ್ಷಣೆಗೆ ಬಂದಿದ್ದ 4ನೇ ತರಗತಿಯ...

sandeep kanivihalli
Homeಅಪರಾಧ

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಕಣಿವಿಹಳ್ಳಿಯಲ್ಲಿ ನೀರು ತರಲು ಹೋಗಿದ್ದ ಬಾಲಕ ಸಂದೀಪ್ (15) ಕೊಳವೆಬಾವಿ ಬಳಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.