Home ಸುದ್ದಿಗಳು ಜೆಸಿಐ ಸಂಸ್ಥೆ ವಲಯ ಅಧ್ಯಕ್ಷರಾಗಿ ಮಧುಸೂದನ ನಾವಡ ಗೆಲುವು
ಸುದ್ದಿಗಳು

ಜೆಸಿಐ ಸಂಸ್ಥೆ ವಲಯ ಅಧ್ಯಕ್ಷರಾಗಿ ಮಧುಸೂದನ ನಾವಡ ಗೆಲುವು

Share
Madhusudan Navada
Share

ಸಿರಿಸುದ್ದಿ.ಕಾಂ, ಶಿವಮೊಗ್ಗ: ನಗರದ ಒಕ್ಕಲಿಗರ ಭವನದಲ್ಲಿ ಜರುಗಿದ ವಲಯ ಸಮ್ಮೇಳನದಲ್ಲಿ ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವ್ಯಕ್ತಿತ್ವ ವಿಕಸನ ಸಂಸ್ಥೆಯ ವಲಯ-24ರ ವಲಯ ಅಧ್ಯಕ್ಷರಾಗಿ ಜೆಎಫ್ಡಿ ಮಧುಸೂದನ ನಾವಡ ಭಾನುವಾರ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಬಯಸಿ ಹೊಸನಗರ ಡೈಮೆಂಟ್ ಘಟಕದ ಜೆಎಫ್ಡಿ ಮಧುಸೂದನ ನಾವಡ ಹಾಗೂ ಜೆಸಿಐ ಧಾರವಾಡ ವಿದ್ಯಾಕಾಶಿ ಘಟಕದ ಜೆಸಿ ಪ್ರವೀಣ್ ದೇಶಪಾಂಡೆ ಅವರು ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆ ಮುಕ್ತಾಯದ ಬಳಿಕ ಮಧುಸೂದನ ನಾವಡ ಜಯಶಾಲಿಯಾಗಿದ್ದಾರೆ.

4 ಉಪಾದ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಿದ್ದ ಆರು ಜನರ ಪೈಕಿ ಜೆಸಿಐ ರಾಣೆಬೆನ್ನೂರು ಜೆಸಿ ಕುಮಾರ ಬೆಣ್ಣಿ , ಜೆಸಿಐ ತೀರ್ಥಹಳ್ಳಿಯ ಜೆಸಿ ಅಭಿಜಿತ್ ಹಿರಿಯಾ, ಜೆಸಿಐ ಹಗರಿಬೊಮ್ಮನಹಳ್ಳಿ ಸನ್ ಪ್ಲವರ್, ಜೆಸಿ ಅಮೃತ್ ಚಟ್ರಿಕಿ, ಜೆಸಿಐ ಶಿವಮೊಗ್ಗ ಸ್ಟಾರ್ಸ್ ಜೆಸಿ ಗಣೇಶ ಪೈ ಅವರು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಪಡೆದ ವಿಜಯಶಾಲಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಜೆಸಿಐ ಕಂಪ್ಲಿ ಸೋನಾ ರಸೂಲ್, ಜೆಸಿಐ ಶಿವಮೊಗ್ಗ ಮೆಟ್ರೊದ ಜೆಸಿ ಪ್ರಮೋದ ಶಾಸ್ತ್ರಿ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಜೆಸಿ ಎಂ.ಗಣೇಶ್ ಅವರು ವಲಯ ನಿರ್ದೇಶಕರುಗಳಾಗಿದ್ದಾರೆ.

ಕೇರಳದ ಜೆಸಿ ವರ್ಷ ಮೆನನ್ ಚುನಾವಣೆ ಅಧಿಕಾರಿಯಾಗಿದ್ದರು. ಚುನಾವಣೆ ಸಮಿತಿ ಅಧ್ಯಕ್ಷರಾಗಿ ಜೆಸಿ ಚನ್ನವೀರೇಶ್ ಹಾವಣಗಿ ಕರ್ತವ್ಯ ನಿರ್ವಹಿಸಿದರು. ನ್ಯಾಷನಲ್ ಡೈರೆಕ್ಟರ್ ಜೆಸಿ ಅನುಷ್ ಗೌಡ, ವಲಯ ಅಧ್ಯಕ್ಷ ಜೆಸಿಐ ಸೆನಟರ್ ಗೌರೀಶ್ ಭಾರ್ಗವ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಸಿಲಿಂಡರ್ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯ

ದಾವಣಗೆರೆ  : ಜಿಲ್ಲೆಯ ಎಲ್ಲಾ ಬಿಪಿಸಿಎಲ್, ಹೆಚ್‍ಪಿಸಿಎಲ್ ಹಾಗೂ   ಐಓಸಿಎಲ್ ಅನಿಲ ಗ್ರಾಹಕರ ತಮ್ಮ...

Homeಸುದ್ದಿಗಳು

ರಾಂಚಿಯಲ್ಲಿ ಎಐಎಸ್ಎ ಅಧ್ಯಕ್ಷೆ ಮೇಲಿನ ದಾಳಿ: ಸಂಘಿ ಗೂಂಡಾಗಳ ಬಂಧನಕ್ಕೆ ಗಂಗಾವತಿಯಲ್ಲಿ ಆಗ್ರಹ

ಗಂಗಾವತಿ : ಜಾರ್ಖಂಡ್‌ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟ ನಡೆಸುತ್ತಿರುವ...

Homeಸುದ್ದಿಗಳು

ಸಚಿವ ಸ್ಥಾನಕ್ಕೆ ಮನವಿ ಮಾಡಿರುವೆ : ಎಂ.ಪಿ.ಲತಾ

ಹರಪನಹಳ್ಳಿ : ಹಿರಿಯ ನಾಯಕರ ಸಲಹೆಯಂತೆ ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಗೆ...

Homeಸುದ್ದಿಗಳು

ವಿಜಯನಗರ ಜಿಲ್ಲೆಯಲ್ಲಿ ಭೀಕರ ಮುಂಗಾರು ಅಭಾವ ಹಾಗೂ ಶೇ.60 ರಷ್ಟು ಮಳೆ ಕೊರತೆ: 

ವಿಜಯನಗರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದ್ದು,...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.