Home ಸುದ್ದಿಗಳು ಜೆಸಿಐ ಸಂಸ್ಥೆ ವಲಯ ಅಧ್ಯಕ್ಷರಾಗಿ ಮಧುಸೂದನ ನಾವಡ ಗೆಲುವು
ಸುದ್ದಿಗಳು

ಜೆಸಿಐ ಸಂಸ್ಥೆ ವಲಯ ಅಧ್ಯಕ್ಷರಾಗಿ ಮಧುಸೂದನ ನಾವಡ ಗೆಲುವು

Share
Madhusudan Navada
Share

ಸಿರಿಸುದ್ದಿ.ಕಾಂ, ಶಿವಮೊಗ್ಗ: ನಗರದ ಒಕ್ಕಲಿಗರ ಭವನದಲ್ಲಿ ಜರುಗಿದ ವಲಯ ಸಮ್ಮೇಳನದಲ್ಲಿ ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವ್ಯಕ್ತಿತ್ವ ವಿಕಸನ ಸಂಸ್ಥೆಯ ವಲಯ-24ರ ವಲಯ ಅಧ್ಯಕ್ಷರಾಗಿ ಜೆಎಫ್ಡಿ ಮಧುಸೂದನ ನಾವಡ ಭಾನುವಾರ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಬಯಸಿ ಹೊಸನಗರ ಡೈಮೆಂಟ್ ಘಟಕದ ಜೆಎಫ್ಡಿ ಮಧುಸೂದನ ನಾವಡ ಹಾಗೂ ಜೆಸಿಐ ಧಾರವಾಡ ವಿದ್ಯಾಕಾಶಿ ಘಟಕದ ಜೆಸಿ ಪ್ರವೀಣ್ ದೇಶಪಾಂಡೆ ಅವರು ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆ ಮುಕ್ತಾಯದ ಬಳಿಕ ಮಧುಸೂದನ ನಾವಡ ಜಯಶಾಲಿಯಾಗಿದ್ದಾರೆ.

4 ಉಪಾದ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಿದ್ದ ಆರು ಜನರ ಪೈಕಿ ಜೆಸಿಐ ರಾಣೆಬೆನ್ನೂರು ಜೆಸಿ ಕುಮಾರ ಬೆಣ್ಣಿ , ಜೆಸಿಐ ತೀರ್ಥಹಳ್ಳಿಯ ಜೆಸಿ ಅಭಿಜಿತ್ ಹಿರಿಯಾ, ಜೆಸಿಐ ಹಗರಿಬೊಮ್ಮನಹಳ್ಳಿ ಸನ್ ಪ್ಲವರ್, ಜೆಸಿ ಅಮೃತ್ ಚಟ್ರಿಕಿ, ಜೆಸಿಐ ಶಿವಮೊಗ್ಗ ಸ್ಟಾರ್ಸ್ ಜೆಸಿ ಗಣೇಶ ಪೈ ಅವರು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಪಡೆದ ವಿಜಯಶಾಲಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಜೆಸಿಐ ಕಂಪ್ಲಿ ಸೋನಾ ರಸೂಲ್, ಜೆಸಿಐ ಶಿವಮೊಗ್ಗ ಮೆಟ್ರೊದ ಜೆಸಿ ಪ್ರಮೋದ ಶಾಸ್ತ್ರಿ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಜೆಸಿ ಎಂ.ಗಣೇಶ್ ಅವರು ವಲಯ ನಿರ್ದೇಶಕರುಗಳಾಗಿದ್ದಾರೆ.

ಕೇರಳದ ಜೆಸಿ ವರ್ಷ ಮೆನನ್ ಚುನಾವಣೆ ಅಧಿಕಾರಿಯಾಗಿದ್ದರು. ಚುನಾವಣೆ ಸಮಿತಿ ಅಧ್ಯಕ್ಷರಾಗಿ ಜೆಸಿ ಚನ್ನವೀರೇಶ್ ಹಾವಣಗಿ ಕರ್ತವ್ಯ ನಿರ್ವಹಿಸಿದರು. ನ್ಯಾಷನಲ್ ಡೈರೆಕ್ಟರ್ ಜೆಸಿ ಅನುಷ್ ಗೌಡ, ವಲಯ ಅಧ್ಯಕ್ಷ ಜೆಸಿಐ ಸೆನಟರ್ ಗೌರೀಶ್ ಭಾರ್ಗವ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeರಾಜಕೀಯಸುದ್ದಿಗಳು

ಅಡವಿಹಳ್ಳಿಯಲ್ಲಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ

ಹರಪನಹಳ್ಳಿ: ಮೊಬೈಲ್ಗೆ ಹೇಗೆ ನೆಟ್ವರ್ಕ್ ಟವರ್ ಮುಖ್ಯವೋ, ಹಾಗೆಯೇ ದೇವಸ್ಥಾನದ ಗೋಪುರಕ್ಕೆ ಕಳಸ ಬಹುಮುಖ್ಯ, ದೇವಸ್ಥಾನಗಳು...

Homeಸುದ್ದಿಗಳು

ಕೋಟೆ ಅಂಜನೇಯ ದೇವಸ್ಥಾನ ಜಾಗ ಒತ್ತುವರಿ ತೆರವುಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ

ಹರಪನಹಳ್ಳಿ (ವಿಜಯನಗರ ಜಿಲ್ಲೆ ) : ಪಾಳೆಗಾರ ರಾಜಸೋಮಶೇಖರ ನಾಯಕರ ಕಾಲದ ನಿರ್ಮಾಣವಾದ ಕೋಟೆ ಅಂಜನೇಯ...

ssm dvg
ಸುದ್ದಿಗಳು

ಶಾಮನೂರು ಶಿವಶಂಕರಪ್ಪ ಜನ್ಮದಿನ: ಜೂನ್‌ 17ಕ್ಕೆ  ಉಚಿತ ಸಾಮೂಹಿಕ ವಿವಾಹ  

ಹರಪನಹಳ್ಳಿ : ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ 96ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಜೂನ್...

vijaya vikrama
Homeಸುದ್ದಿಗಳು

ದೇಶದ ಬದಲಾವಣೆಯಲ್ಲಿ ಪತ್ರಕರ್ತರ ಪಾತ್ರ ದೊಡ್ಡದು : ಕೋಡಿಹಳ್ಳಿ ಭೀಮಪ್ಪ

ಹರಪನಹಳ್ಳಿ : ಪತ್ರಿಕೋದ್ಯಮದಲ್ಲಿ ನಿಷ್ಠೆ, ಧೈರ್ಯ ಮತ್ತು ಪ್ರಾಮಾಣಿಕತೆ ಇದ್ದರೆ ಸಮಾಜದ ದಿಕ್ಕು ಬದಲಾಯಿಸಲು ಸಾಧ್ಯವಾಗುತ್ತದೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.