Home ಕೃಷಿ ತೌಡೂರು ಸಹಕಾರ ಸಂಘಕ್ಕೆ ಮರುಜೀವ : ವೈ.ಡಿ.ಅಣ್ಣಪ್ಪ
ಕೃಷಿ

ತೌಡೂರು ಸಹಕಾರ ಸಂಘಕ್ಕೆ ಮರುಜೀವ : ವೈ.ಡಿ.ಅಣ್ಣಪ್ಪ

Share
TODURU,SAHAKAR SANGA,YD ANNAPPA,DEVENDRAPPA,BDCC PRSIDENT
ಹರಪನಹಳ್ಳಿ ತಾಲ್ಲೂಕು ತೌಡೂರು ಗ್ರಾಮದಲ್ಲಿ ಜರುಗಿದ ಸಮಾರಂಭದಲ್ಲಿ ಸಂಘದ ಗೋದಾಮು ಮತ್ತು ವ್ಯಾಪಾರಿ ಮಳಿಗೆ ಉದ್ಘಾಟಿಸಲಾಯಿತು.
Share

ಹರಪನಹಳ್ಳಿ : ಸಹಕಾರ ಸಂಘಗಳ ಯಶಸ್ಸಿಗೆ ಆಡಳಿತ ಮಂಡಳಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೆಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತೌಡೂರು ಗ್ರಾಮದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ, ಸಂಘದ ಗೋದಾಮು ಮತ್ತು ವ್ಯಾಪಾರಿ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಒಂದು ಗ್ರಾಮದಲ್ಲಿ ಶಾಲೆ, ಆಸ್ಪತ್ರೆ ಜೊತೆಗೆ ಸಹಕಾರ ಸಂಘವೂ ಇರಬೇಕು. ಸಹಕಾರ ಸಂಘದ ನಿರ್ವಹಿಸುವ ಆಡಳಿತ ಮಂಡಳಿ ಜವಾಬ್ದಾರಿ ಮರೆತರೆ ಜನರಿಗೆ ಅನ್ಯಾಯ ಆಗುತ್ತದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಮಾತನಾಡಿ, ತೌಡೂರು ಸಹಕಾರ ಸಂಘ ಮುಟ್ಟುಗೋಲು ಆಗಿ ಕಾಮಗಾರಿ ಅಪೂರ್ಣಗೊಂಡಿದ್ದವು. ಪುನಃ ಸಂಘಕ್ಕೆ ಮರುಜೀವ ಕೊಟ್ಟು ಅನ್ಯಾಯಕ್ಕೆ ಒಳಗಾದ ರೈತರಿಗೆ ನ್ಯಾಯ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ. ನಷ್ಟದಲ್ಲಿರುವ ಸಹಕಾರ ಸಂಘದ ಏಳಿಗೆಗೆ ಪ್ರತಿಯೊಬ್ಬರು ಕೈಜೋಡಿಸಿ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಸಹಕಾರ ಸಂಘಗಳು ಜಾತಿ, ಧರ್ಮ ಮುಕ್ತವಾಗಿರುವ ಅಗತ್ಯವಿದೆ ಎಂದರು. ಸಹಕಾರ ಸಂಘದ ಅಧ್ಯಕ್ಷ ಕೆ.ಜಿ.ಶಿವಯೋಗಿ ಅಧ್ಯಕ್ಷತೆ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಕೆ.ಪರಸಪ್ಪ, ಕೆ.ಮಂಜುನಾಥಯ್ಯ, ಎಂ.ವಿಜಯಕುಮಾರ, ಕೊಟ್ರಗೌಡ, ಕೆ.ಭರಮಪ್ಪ, ಪುಟ್ಟಣ್ಣ, ಎಸ್.ಕಾಮಪ್ಪ, ಪುತ್ರಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ, ಕಾವಲಹಳ್ಳಿ ಶೇಖರಪ್ಪ, ಡಿ.ಸಿದ್ದಪ್ಪ, ರಾಝಾನಾಯ್ಕ, ಕೆಂಚಪ್ಪ, ರಾಮನಗೌಡ ಇದ್ದರು.

“ತೌಡೂರು ಸಹಕಾರ ಸಂಘ ಸೂಪರ್‍ಸಿಡ್ ಆಗಿತ್ತು. ನಾನು ನಿರ್ದೇಶಕನಾದ ಮೇಲೆ ತೌಡೂರು ಗ್ರಾಮಸ್ಥರಿಗೆ, ಗ್ರಾಹಕ ರೈತರಿಗೆ ಅನ್ಯಾಯ ಆಗಬಾರದು ವಿವಿದೋದ್ದೇಶ ಸಹಕಾರ ಸಂಘಕ್ಕೆ ಮರುಜೀವ ಕೊಡಲಾಗಿದೆ. ಪ್ರತಿಯೊಬ್ಬ ಗ್ರಾಹಕರು ಸಹಕರಿಸಿ ಸಹಕಾರ ಸಂಘ ಉಳಿಸಿ, ಬೆಳೆಸಬೇಕು”

ವೈ.ಡಿ.ಅಣ್ಣಪ್ಪ, ನಿರ್ದೇಶಕ, ಬಿಡಿಸಿಸಿ ಬ್ಯಾಂಕ್. ವಿಜಯನಗರ.

Share

Leave a comment

Leave a Reply

Your email address will not be published. Required fields are marked *

Related Articles
myduru formers
Homeಕೃಷಿ

400 ಕೆವಿ ವಿದ್ಯುತ್ ಗೋಪುರ ನಿರ್ಮಾಣಕ್ಕೆ ರೈತರ ತೀವ್ರ ವಿರೋಧ 

ಹರಪನಹಳ್ಳಿ: ಜಮೀನುಗಳಲ್ಲಿ 400 ಕೆವಿ ವಿದ್ಯುತ್ ಟವರ್ (ಗೋಪುರ) ನಿರ್ಮಿಸುವ ಸರ್ಕಾರದ ಯೋಜನೆಗೆ ಹರಪನಹಳ್ಳಿ ಹಾಗೂ...

sunflower
ಕೃಷಿಸುದ್ದಿಗಳು

ವಿಜಯನಗರ ಜಿಲ್ಲೆಯ ಎಲ್ಲೆಲ್ಲಿ ಸೂರ್ಯಕಾಂತಿ ಖರೀದಿಸುತ್ತಾರೆ ?

ವಿಜಯನಗರ (ಹೊಸಪೇಟೆ) :   ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನ ಹಿಂಗಾರು...

RAIN DAMAGES
ಕೃಷಿ

ಹರಪನಹಳ್ಳಿಯಲ್ಲಿ ವೀಕೆಂಡ್ ಬಿರುಗಾಳಿ ಮಳೆಯ ಆರ್ಭಟ: ತತ್ತರಿಸಿದ ಹಳ್ಳಿಗಳು!

ಹರಪನಹಳ್ಳಿ: ತಾಲ್ಲೂಕಿನಲ್ಲಿ ಶನಿವಾರ ಸಂಜೆ ದಿಢೀರ್‌ ಅಪ್ಪಳಿಸಿದ ರಭಸದ ಬಿರುಗಾಳಿ ಮತ್ತು ಧಾರಾಕಾರ ಮಳೆಗೆ ಜನಜೀವನ...

kodihalli bheemanna
ಕೃಷಿ

ಪಕ್ಷಿಗಳಿಗೆ ನೀರುಣಿಸುವ ಕಾಯಕ ಮಾದರಿ : ಕೋಡಿಹಳ್ಳಿ ಭೀಮಪ್ಪ

ಹರಪನಹಳ್ಳಿ: ಜೆಸಿಐ ಸಂಸ್ಥೆಯು ಮರಗಿಡಗಳಲ್ಲಿ ಮಡಿಕೆಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿರುವುದು ಅತ್ಯಂತ ಮಾದರಿಯಾಗಿದೆ....

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.