ಹರಪನಹಳ್ಳಿ : ತೆಲಿಗಿ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ವರ್ಗಾವಣೆಗೆ ಆಗ್ರಹಿಸಿ ಇಲ್ಲಿಯ ರೈತ ಮುಖಂಡರು ತೆಲಿಗಿ ನಾಡಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಗುಂಡಗತ್ತಿ ಕಂದಾಯ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಅವರು ಸೇವಾನಗರ, ಬೆಂಡಿಗೆರೆ, ಬೆಂಡಿಗೇರೆ ಸಣ್ಣತಾಂಡ, ಅಳಗಂಚಿಕೇರಿ, ಬಿಕ್ಕಿಕಟ್ಟೆ ವ್ಯಾಪ್ತಿಯ ರೈತರು ತುಂಡು ಭೂಮಿ ನೊಂದಣಿ, ಪೌತಿಖಾತೆ, ವಂಶ ವೃಕ್ಷ, ಮರಣ ಪತ್ರಕ್ಕೆ ಲಂಚ ಪಡೆದು ಕೆಲಸ ಮಾಡುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ರೈತರಾದ ವಿಶ್ವನಾಥ ಶಿರಗಾನಹಳ್ಳಿ, ಗುರುಸಿದ್ದಪ್ಪ, ಕುಮಾರ, ಹನುಮಂತಪ್ಪ, ಕೊಟ್ರೇಶಿ, ದರ್ಶನ, ಜಯಂತ್, ಈಶಪ್ಪ, ನಾಗರಾಜ್, ರುದ್ರೇಶಿ, ಮಂಜುನಾಥ, ಕುಬ್ಯನಾಯ್ಕ, ನಾಗರಾಜ ನಾಯ್ಕ ಇತರರಿದ್ದರು.
Leave a comment