ಹರಪನಹಳ್ಳಿ : ತಾಲ್ಲೂಕಿನ ಕೆರೆಗುಡಿಹಳ್ಳಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟವನ್ನು ಬುಧವಾರ ಅಸ್ತಿತ್ವಕ್ಕೆ ತರಲಾಗಿದೆ.
22 ಮಹಿಳಾ ಸದಸ್ಯರ ಒಕ್ಕೂಟ ರಚಿಸಲಾಗಿದೆ. ಮೊದಲ ಸಭೆಯ ಅಧ್ಯಕ್ಷತೆಯನ್ನು ರೈತ ಮಹಿಳೆ ಬಿ.ಎಸ್.ದೇವಿರಮ್ಮ ವಹಿಸಿದ್ದರು. ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ವಿಭಾಗದ ಹಾಲು ಒಕ್ಕೂಟ ಶೇಖರಣ ವಿಭಾಗದ ವಿಸ್ತರಣಾಧಿಕಾರಿ ಡಿ.ಪಿ.ಪರಮೇಶ್ವರಪ್ಪ, ಬಿ.ಮೃತ್ಯುಂಜಯ, ಸಮಾಲೋಚಕ ಜಿ.ಪಿ. ಶಿವಕುಮಾರ ಗ್ರಾಮದ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಎಸ್.ಬಸವರಾಜ, ಅಂಗಡಿ ಕಾಡಪ್ಪ, ಪಿ.ನಾಗರಾಜ್, ಶೇಖರಪ್ಪ, ರೇವಣಸಿದ್ದಪ್ಪ, ನಾಗಪ್ಪ, ಬೋವಿ ಅಂಜಿನಪ್ಪ ಹಾಗೂ ಒಕ್ಕೂಟದ ಸದಸ್ಯರು ಇದ್ದರು.
Leave a comment