ಹರಪನಹಳ್ಳಿ : ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಶ್ರೀ ಸಿದ್ದಗಂಗಾ ಮಠ ಗೆಳೆಯರ ಬಳಗದ ವತಿಯಿಂದ ದಾಸೋಹಿ ದಿನ ವನ್ನು ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಬುಧವಾರ ಜರುಗಿತು.
ದಾಸೋಹಿ ಶಿವಕುಮಾರ ಸ್ವಾಮಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಶ್ರೀಗಳು ಮಾಡಿದ ಅಕ್ಷರ, ಅನ್ನದಾಸೋಹ ಜಗತ್ತಿಗೆ ಮಾದರಿಯಾಗಿದೆ. ಶ್ರೀಮಠವು ಎಲ್ಲ ಸಮಾಜದ ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ನೀಡುತ್ತಿರುವುದು ಕರುನಾಡಿನ ಹೆಮ್ಮೆ. ಅಂತಹ ಮಹನೀಯರ ಶ್ರೀಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರು ತೋರಿದ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.
ನಗರಸಭೆ ಮಾಜಿ ಅದ್ಯಕ್ಷ ಹೆಚ್.ಎಂ.ಅಶೋಕ ಹರಾಳ್ ಮಾತನಾಡಿ, ದಾಸೋಹದ ಮೂಲಕ ಲಕ್ಷಾಂತರ ಜನರ ಬದುಕಿಗೆ ಶ್ರೀಗಳು ಆಸರೆಯಾಗಿದ್ದರು. ಮಠದಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ದೊಡ್ಡ ಹುದ್ದೆ ಅಲಂಕರಿಸುವ ಮೂಲಕ ಬದುಕು ರೂಪಿಸಿ ಕೊಂಡಿದ್ದಾರೆ ಎಂದು ಸ್ಮರಿಸಿದರು.
ಮುಖಂಡ ಎಸ್.ಎಂ.ವೀರಭದ್ರಯ್ಯ ಮಾತನಾಡಿ, ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು ನಾಡಿನಲ್ಲಿ ವಿದ್ಯಾದಾನ, ಅನ್ನದಾನಕ್ಕೆ ಮಹತ್ವ ನೀಡಿದವರು. ಮಹಾನ್ ಗುರುಗಳ ಆದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ನಡೆದ ದಾರಿಯಲ್ಲಿ ಸಾಗಬೇಕು ಎಂದು ತಿಳಿಸಿದರು. ದಾಸೋಹ ದಿನಕ್ಕೆ ಆಗಮಿಸಿದ ಭಕ್ತರಿಗೆ ಗೋದಿ ಉಗ್ಗಿ, ಕಾಳು ಫಲ್ಯೆ, ರೊಟ್ಟಿ, ಅನ್ನ ಸಾಂಬಾರನ್ನು ಸಾರ್ವಜನಿಕರು ಮತ್ತು ಭಕ್ತರಿಗೆ ಅನ್ನದಾಸೋಹ ಸೇವಿಸಿದರು.
ಮುಖಂಡರಾದ ಕಿರಣ್ ಕುಮಾರ್, ರವಿ ಅಧಿಕಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿ ತಾಲೂಕು ಅದ್ಯಕ್ಷ ಎ.ನಾಗೇಂದ್ರಪ್ಪ, ಶ್ರೀಸಿದ್ದಗಂಗಾ ಮಠ ಗೆಳೆಯರ ಬಳಗದ ಅದ್ಯಕ್ಷ ಕೆ.ಸುಭಾಷ, ಮಾಲತೇಶ ಗೌಡ ಶಿವಕುಮಾರ್, ವೀರೇಶ್.ಕೆ, ಬಸವನಗೌಡ, ವೀರೇಶ್, ಮನೋಜ್ ಕುಮಾರ್.ಎಂ, ಧನಂಜಯ್ ಕುಮಾರ್.ಎಂ, ಮಲ್ಲಿಕಾರ್ಜುನ್ ಗೌಡ.ಕೆ.ಜಿ, ಜಗದೀಶ್ ಕುಮಾರ್, ಕೆ.ಜಿ.ಗೌಡ, ಅಭಿಷೇಕ್ ಕುಮಾರ, ಘವೇಂದ್ರ, ವೀರೇಶ್ ಆಚರ್, ಸನ್ನಿಧಿ, ಜಿ.ಕೆ.ಸರ್ಪಭೂಷಣ್, ಜಿ.ಕೆ.ಗುರುರಾಜ್, ಪ್ರಜ್ವೀತ್ ಕುಮಾರ್, ವೀರೇಶ್ ಬಡಿಗೇರ್, ಅನಸ್ ಹೋಂ ಗಾರ್ಡ್, ವಾಸಿಮ್ ಅಕ್ರಂ, ಕೆ.ಜಿ ಸಿದ್ದನಗೌಡ ಇದ್ದರು.
Leave a comment