ಹರಪನಹಳ್ಳಿ: ತಾಲ್ಲೂಕಿನ ಬಾಗಳಿ ಗ್ರಾಪಂ ವ್ಯಾಪ್ತಿಯ ಬಾಗಳಿ ಗ್ರಾಮದಲ್ಲಿ ಮನರೇಗಾದಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗುರುಮೂರ್ತಿ ಮೂಗನಗೌಡ್ರು(52) ಅವರು ಗುರುವಾರ ಬೆಳಗ್ಗೆ 7.40 ಕ್ಕೆ ಹಠಾತ್ ಕುಸಿದು ಬಿದ್ದು ನಿಧನರಾಗಿದ್ದಾರೆ . ಮೃತರು ಪತ್ನಿ ಎಂ.ಸಾವಿತ್ರಮ್ಮ, ಇಬ್ಬರು ಪುತ್ರರು, ಮೂವರು ಸಹೋದರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಮನರೇಗಾ ಎಡಿ ಭೇಟಿ: ಕೂಲಿಕಾರ್ಮಿಕ ಗುರುಮೂರ್ತಿ ನಿಧನ ವಿಷಯ ತಿಳಿದು ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ತಾಪಂನ ಮನರೇಗಾ ಎಡಿ ಸೋಮಶೇಖರ್ ಯು.ಎಚ್., ಪಿಡಿಒ ಷಣ್ಮುಖಪ್ಪ, ನರೇಗಾ ಹಾಗೂ ಗ್ರಾಪಂ ಸಿಬ್ಬಂದಿ ಆಗಮಿಸಿ ಪರಿಶೀಲಿಸಿ, ಸಂತಾಪ ಸೂಚಿಸಿದ್ದಾರೆ.
Leave a comment