ವಿಜಯನಗರ:
ಹಂಪಿ ಉತ್ಸವದ ಎರಡನೆಯ ದಿನವಾದ ಶನಿವಾರ ಶ್ರೀ ವಿರೂಪಾಕ್ಷ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ನಾಡಿನ ಸಂಸ್ಕೃತಿ, ಸೊಗಡು, ಜನಪದ ಕಲೋಕ್ತಿ ಒಳಗೊಂಡತೆ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ರಸಮಂಜರಿ ಅನಾವರಣಗೊಂಡಿತು.
ಹೊಸಪೇಟೆಯ ಕೆ.ಪ್ರೇಮ ಮತ್ತು ತಂಡವು ‘ನಮ್ಮಮ್ಮ ಶಾರದೆ..ಉಮಾ ಮಹೇಶ್ವರಿ’ ವಚನ ಗಾಯನ ಹಾಡುವ ಮೂಲಕ ಸಾಂಸ್ಕೃತಿಕ ಸಂಜೆ ಆರಂಭಿಸಿದರು. ಹರಪನಹಳ್ಳಿಯ ಶರಣಬಸವ ಶಾಸ್ತ್ರಿ ಹಿರೇಮಠ ಮತ್ತು ತಂಡವು ಕಥಾ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ಹುಬ್ಬಳ್ಳಿಯ ಮಯೂರ ನೃತ್ಯ ಮಂದಿರ ತಂಡದಿಂದ ನೃತ್ಯರೂಪಕ ಪ್ರದರ್ಶಿಸಿದರು. ಹೊಸಪೇಟೆ ಸುಮಂಗಲ ಕಾಳಗಟ್ಟ ಮತ್ತು ತಂಡವು ದಾಸರ ಪದಗಳ ಗಾಯನ ಪ್ರಸ್ತುತಪಡಿಸಿದರು.
ಕಂಪ್ಲಿಯ ಅಶ್ವಿನಿ.ಡಿ ತಂಡವು ಭರತನಾಟ್ಯ, ಕುರಿಹಟ್ಟಿ ಗ್ರಾಮದ ಎಚ್.ರಾಜಣ್ಣ ಮತ್ತು ತಂಡ ವಚನ ಗಾಯನಗಳ ಮೂಲಕ ವಚನಸಾಹಿತ್ಯಲೋಕ ಅನಾವರಣಗೊಳಿಸಿದರು. ಕೂಡ್ಲಿಗಿ ಸುಧಾ ದಿಬ್ಬದಹಳ್ಳಿ ಮತ್ತು ತಂಡ ಜಾನಪದ ಗಾಯನದ ಮೂಲಕ ಜನಪದ ಸೊಗಡು ತೆರೆದಿಟ್ಟರು.

ಕಲಬುರಗಿ ಪ್ರಶಾಂತ್ ಈ.ಕಂಬಾರ್ ಮತ್ತು ತಂಡ ಸುಗಮ ಸಂಗೀತ, ದಾವಣಗೆರೆ ರುದ್ರಾಕ್ಷಿಬಾಯಿ ಸಿ.ಕೆ., ಮತ್ತು ತಂಡ ಲಂಬಾಣಿ ನೃತ್ಯ, ಮೋರಿಗೇರಿ ಬಿ.ಯುವರಾಜ ಗೌಡ ಮತ್ತು ತಂಡ ದಾಸರ ಪದಗಳ ಗಾಯನ ಪ್ರಸ್ತುತಪಡಿಸಿದರು.
ಹಗರಿಬೊಮ್ಮನಹಳ್ಳಿ ಗೀತಾ ಈರಣ್ಣ ಮತ್ತು ತಂಡ, ಸಮೂಹ ನೃತ್ಯ ರೂಪಕ, ಕೊಟ್ಟೂರು ಬಿ. ಸೌಮ್ಯ ಮತ್ತು ತಂಡ ಭರತನಾಟ್ಯ, ಕೂಡ್ಲಿಗಿ ನರಸಿಂಹಪ್ಪ ಮತ್ತು ತಂಡ ವಚನ ಸಂಗೀತ, ಚಿತ್ರದುರ್ಗ ಡಾ.ಭವ್ಯರಾಣಿ.ಟಿ ತಂಡ ವಯಲಿನ್ ವಾದನ ನಡೆಸಿಕೊಟ್ಟರು.
ಸಂಡೂರು ಅಪ್ಪು ಡ್ಯಾನ್ಸ್ ಸ್ಟುಡಿಯೋ ಸಮೂಹ ನೃತ್ಯ ಪ್ರದರ್ಶಿಸುವ ಮೂಲಕ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡರು. ಕಂಪ್ಲಿಯ ಸಿ.ಡಿ. ಮೌನೇಶ್ ಮತ್ತು ತಂಡ ತತ್ವಪದ ಗಾಯನ, ಹೊಸಪೇಟೆಯ ಎಚ್.ಎಂ. ಲಲಿತಾ ಮತ್ತು ತಂಡ ಹಿಂದೂಸ್ತಾನಿ ಸಂಗೀತ. ತಂಬ್ರಹಳ್ಳಿಯ ಕುಮಾರ್ ಭಜಂತ್ರಿ ಮತ್ತು ತಂಡದಿಂದ ಸಾಕ್ರೋಪೋನ್. ಬಳ್ಳಾರಿಯ ಹೊಸಯರಗುಡಿ ರೇಖಾ ಎಸ್.ವಿ ತಂಡ ಸುಗಮ ಸಂಗೀತ, ಹಗರಿಬೊಮ್ಮನಹಳ್ಳಿಯ ಕೊಟ್ರಗೌಡ ಎಂ. ತಂಡದಿಂದ ಕೊಳಲು ವಾದನ ನುಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೈ.ಎ.ಕಾಳೇಶ್ ಅವರು ವೇದಿಕೆಯ ನೋಡೆಲ್ ಅಧಿಕಾರಿಯಾಗಿ ಉಸ್ತುವಾರಿ ವಹಿಸಿದ್ದರು.
ಈ ವೇಳೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ಸೇರಿದಂತೆ ನೋಡೆಲ್ ಅಧಿಕಾರಿಗಳಾದ ಮಲ್ಲೇಶ್, ಕೊಟ್ರೇಶ್ ಹಾಗೂ ಇತರರು ಇದ್ದರು.
ವೇದಿಕೆಯಲ್ಲಿ ಭಾಗವಹಿಸಿದ್ದ 33 ಕಲಾತಂಡಗಳಿಗೂ ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
