ಹರಪನಹಳ್ಳಿ : ತಾಲ್ಲೂಕಿನ ಕಾಯಕದಹಳ್ಳಿ ಮಯೂರಿ ಫಾರಂ ಹೌಸ್ ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಸಂಭ್ರಮದಿಂದ ಜರುಗಿತು.
ಸಾನಿಧ್ಯವಹಿಸಿದ್ದ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ ಅವರು, ವಿಶ್ವಚೇತನ ಸ್ವಾಮಿ ವಿವೇಕಾನಂದ ಅವರ ತತ್ವಾದರ್ಶಗಳು ಸರ್ವರಿಗೂ ಮಾದರಿಯಾಗಿವೆ. ಮಹಾನ್ ತಪಸ್ವಿಯಾಗಿದ್ದ ಅವರು ದೇಶ, ವಿದೇಶಗಳಲ್ಲಿ ಭಾರತೀಯ ಪರಂಪರೆಯ ಹಿರಿಮೆಯನ್ನು ಪರಿಚಯಿಸಿದ್ದಾರೆ. ಅಂತಹ ಮಹಾನ್ ಚೇತನ ಸದಾ ಸ್ಮರಿಸಬೇಕು ಎಂದು ತಿಳಿಸಿದರು.
ಸ್ಥಳೀಯ ವಿಶ್ವಚೇತನ ಕಲಾವಿದರು ಸ್ವಾಮಿ ವಿವೇಕಾನಂದರ ಕುರಿತಾದ ಗೀತೆಗಳನ್ನು ಹಾಡಿ ರಂಜಿಸಿದರು. ಕೊಟ್ನೇಕಲ್ ಮಾತೃಶ್ರೀ ಶಿವಶರಣೆ ಕಾತೇನಿ ಅಮ್ಮ ಮಾತನಾಡಿದರು. ಎಚ್.ಎಂ.ಕೊಟ್ರಯ್ಯ, ಗುರುಸಿದ್ದಯ್ಯ ಕಲ್ಲಹಳ್ಳಿ, ಕೆ.ಎಂ.ಬಸವರಾಜಯ್ಯ, ಎಸ್.ಎಂ.ವೀರಭದ್ರಯ್ಯ, ಮಟ್ಟಿ ಮಂಜುನಾಥ ಇತರರಿದ್ದರು.
Leave a comment