Home ಸುದ್ದಿಗಳು ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್
ಸುದ್ದಿಗಳು

ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್

Share
ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್
Share

 ಹರಪನಹಳ್ಳಿ : ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ಶನಿವಾರ ಜರುಗಿದ ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಂಡಿರುವ 2123 ಪ್ರಕರಣಗಳ ಪೈಕಿ ಹೆಚ್ಚಿನ ಸಂಖ್ಯೆಯ ವ್ಯಾಜ್ಯಪೂರ್ವ ಪ್ರಕರಣಗಳ ವಾದಿ ಪ್ರತಿವಾದಿಗಳು ರಾಜೀಸಂಧಾನ ಮಾಡಿಕೊಂಡಿರುವುದು ಗಮನ ಸೆಳೆದಿದೆ.

ಹಿರಿಯ ಮತ್ತು ಕಿರಿಯ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡಿದ್ದ ಒಟ್ಟು 3317 ಪೈಕಿ ₹ 1.52 ಕೋಟಿ ಮೌಲ್ಯದ 2123 ಪ್ರಕರಣ ಇತ್ಯರ್ಥಗೊಂಡಿವೆ. ಹಿರಿಯ ಸಿವಿಲ್ ನ್ಯಾಯಧೀಶೆ ಆರ್.ಉಷಾರಾಣಿ ಅವರ ಪೀಠದಡಿ ನಡೆದ ಪರಸ್ಪರ ರಾಜೀಸಂಧಾನದಲ್ಲಿ ವ್ಯಾಜ್ಯಪೂರ್ವ 897 ಪ್ರಕರಣ ಪೈಕಿ ₹ 5.34 ಲಕ್ಷ ಮೌಲ್ಯದ 390 ಪ್ರಕರಣ ಪರಿಹರಿಸಲಾಗಿದೆ. ನ್ಯಾಯಾಲಯದಿಂದ ಕೈಗೆತ್ತಿಕೊಂಡಿದ್ದ  902 ಪೈಕಿ ₹ 63,89,510 ಮೌಲ್ಯದ 653 ಪ್ರಕರಣ ಇತ್ಯರ್ಪಡಿಸಲಾಗಿದೆ.

ಸಿವಿಲ್ ನ್ಯಾಯಧೀಶ ಎಸ್.ಪಿ.ಮನುಶರ್ಮಾ ಅವರು, ವ್ಯಾಜ್ಯಪೂರ್ವದ 428 ಕೈಗೆತ್ತಿಕೊಂಡಿದ್ದು, ಅದರಲ್ಲಿ  ₹ 12.08 ಲಕ್ಷ ಮೌಲ್ಯದ 243 ಪ್ರಕರಣಗಲ್ಲಿ ರಾಜಿ ಮಾಡಿಸಲಾಗಿದೆ. ನ್ಯಾಯಾಲಯದಿಂದ ಕೈಗೆತ್ತಿಕೊಂಡಿದ್ದ 1090 ಪ್ರಕರಣ ಪೈಕಿ, ₹ 82,26,028 ಮೌಲ್ಯದ 837 ಪ್ರಕರಣದಲ್ಲಿ ಗ್ರಾಹಕರು ರಾಜಿಮಾಡಿಕೊಂಡಿದ್ದಾರೆ. ಇವುಗಳಲ್ಲಿ ಮೋಟಾರು ಅಪಘಾತ, ಬ್ಯಾಂಕ್ ಸಾಲ, ವಿವಾಹ ವಿಚ್ಚೇದನ, ಆಸ್ತಿ ವಿವಾದ ಒಳಗೊಂಡಿವೆ ಎಂದು ನ್ಯಾಯಾಲಯ ಮೂಲಗಳು ತಿಳಿಸಿವೆ. ಲೋಕಅದಾಲತ್ ನಲ್ಲಿ ಹಿರಿಯ ವಕೀಲರುಗಳು, ಕಿರಿಯ ವಕೀಲರು, ವಕೀಲರ ಸಂಘದ ಪದಾಧಿಕಾರಿಗಳಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.