Home ಸುದ್ದಿಗಳು ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್
ಸುದ್ದಿಗಳು

ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್

Share
ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್
Share

 ಹರಪನಹಳ್ಳಿ : ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ಶನಿವಾರ ಜರುಗಿದ ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಂಡಿರುವ 2123 ಪ್ರಕರಣಗಳ ಪೈಕಿ ಹೆಚ್ಚಿನ ಸಂಖ್ಯೆಯ ವ್ಯಾಜ್ಯಪೂರ್ವ ಪ್ರಕರಣಗಳ ವಾದಿ ಪ್ರತಿವಾದಿಗಳು ರಾಜೀಸಂಧಾನ ಮಾಡಿಕೊಂಡಿರುವುದು ಗಮನ ಸೆಳೆದಿದೆ.

ಹಿರಿಯ ಮತ್ತು ಕಿರಿಯ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡಿದ್ದ ಒಟ್ಟು 3317 ಪೈಕಿ ₹ 1.52 ಕೋಟಿ ಮೌಲ್ಯದ 2123 ಪ್ರಕರಣ ಇತ್ಯರ್ಥಗೊಂಡಿವೆ. ಹಿರಿಯ ಸಿವಿಲ್ ನ್ಯಾಯಧೀಶೆ ಆರ್.ಉಷಾರಾಣಿ ಅವರ ಪೀಠದಡಿ ನಡೆದ ಪರಸ್ಪರ ರಾಜೀಸಂಧಾನದಲ್ಲಿ ವ್ಯಾಜ್ಯಪೂರ್ವ 897 ಪ್ರಕರಣ ಪೈಕಿ ₹ 5.34 ಲಕ್ಷ ಮೌಲ್ಯದ 390 ಪ್ರಕರಣ ಪರಿಹರಿಸಲಾಗಿದೆ. ನ್ಯಾಯಾಲಯದಿಂದ ಕೈಗೆತ್ತಿಕೊಂಡಿದ್ದ  902 ಪೈಕಿ ₹ 63,89,510 ಮೌಲ್ಯದ 653 ಪ್ರಕರಣ ಇತ್ಯರ್ಪಡಿಸಲಾಗಿದೆ.

ಸಿವಿಲ್ ನ್ಯಾಯಧೀಶ ಎಸ್.ಪಿ.ಮನುಶರ್ಮಾ ಅವರು, ವ್ಯಾಜ್ಯಪೂರ್ವದ 428 ಕೈಗೆತ್ತಿಕೊಂಡಿದ್ದು, ಅದರಲ್ಲಿ  ₹ 12.08 ಲಕ್ಷ ಮೌಲ್ಯದ 243 ಪ್ರಕರಣಗಲ್ಲಿ ರಾಜಿ ಮಾಡಿಸಲಾಗಿದೆ. ನ್ಯಾಯಾಲಯದಿಂದ ಕೈಗೆತ್ತಿಕೊಂಡಿದ್ದ 1090 ಪ್ರಕರಣ ಪೈಕಿ, ₹ 82,26,028 ಮೌಲ್ಯದ 837 ಪ್ರಕರಣದಲ್ಲಿ ಗ್ರಾಹಕರು ರಾಜಿಮಾಡಿಕೊಂಡಿದ್ದಾರೆ. ಇವುಗಳಲ್ಲಿ ಮೋಟಾರು ಅಪಘಾತ, ಬ್ಯಾಂಕ್ ಸಾಲ, ವಿವಾಹ ವಿಚ್ಚೇದನ, ಆಸ್ತಿ ವಿವಾದ ಒಳಗೊಂಡಿವೆ ಎಂದು ನ್ಯಾಯಾಲಯ ಮೂಲಗಳು ತಿಳಿಸಿವೆ. ಲೋಕಅದಾಲತ್ ನಲ್ಲಿ ಹಿರಿಯ ವಕೀಲರುಗಳು, ಕಿರಿಯ ವಕೀಲರು, ವಕೀಲರ ಸಂಘದ ಪದಾಧಿಕಾರಿಗಳಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಸುದ್ದಿಗಳು

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶೇ.100 ಇ-ಫಾರ್ಮ್ ವಿತರಣೆ ಪೂರ್ಣ

ವಿಜಯನಗರ (ಹೊಸಪೇಟೆ)  : ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ...

Homeಸುದ್ದಿಗಳು

ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026ನೇ ಸಾಲಿಗೆ ಜಿಲ್ಲೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಜಿಲ್ಲಾ ಮಟ್ಟದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.