ಹರಪನಹಳ್ಳಿ : ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ಶನಿವಾರ ಜರುಗಿದ ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಂಡಿರುವ 2123 ಪ್ರಕರಣಗಳ ಪೈಕಿ ಹೆಚ್ಚಿನ ಸಂಖ್ಯೆಯ ವ್ಯಾಜ್ಯಪೂರ್ವ ಪ್ರಕರಣಗಳ ವಾದಿ ಪ್ರತಿವಾದಿಗಳು ರಾಜೀಸಂಧಾನ ಮಾಡಿಕೊಂಡಿರುವುದು ಗಮನ ಸೆಳೆದಿದೆ.
ಹಿರಿಯ ಮತ್ತು ಕಿರಿಯ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡಿದ್ದ ಒಟ್ಟು 3317 ಪೈಕಿ ₹ 1.52 ಕೋಟಿ ಮೌಲ್ಯದ 2123 ಪ್ರಕರಣ ಇತ್ಯರ್ಥಗೊಂಡಿವೆ. ಹಿರಿಯ ಸಿವಿಲ್ ನ್ಯಾಯಧೀಶೆ ಆರ್.ಉಷಾರಾಣಿ ಅವರ ಪೀಠದಡಿ ನಡೆದ ಪರಸ್ಪರ ರಾಜೀಸಂಧಾನದಲ್ಲಿ ವ್ಯಾಜ್ಯಪೂರ್ವ 897 ಪ್ರಕರಣ ಪೈಕಿ ₹ 5.34 ಲಕ್ಷ ಮೌಲ್ಯದ 390 ಪ್ರಕರಣ ಪರಿಹರಿಸಲಾಗಿದೆ. ನ್ಯಾಯಾಲಯದಿಂದ ಕೈಗೆತ್ತಿಕೊಂಡಿದ್ದ 902 ಪೈಕಿ ₹ 63,89,510 ಮೌಲ್ಯದ 653 ಪ್ರಕರಣ ಇತ್ಯರ್ಪಡಿಸಲಾಗಿದೆ.
ಸಿವಿಲ್ ನ್ಯಾಯಧೀಶ ಎಸ್.ಪಿ.ಮನುಶರ್ಮಾ ಅವರು, ವ್ಯಾಜ್ಯಪೂರ್ವದ 428 ಕೈಗೆತ್ತಿಕೊಂಡಿದ್ದು, ಅದರಲ್ಲಿ ₹ 12.08 ಲಕ್ಷ ಮೌಲ್ಯದ 243 ಪ್ರಕರಣಗಲ್ಲಿ ರಾಜಿ ಮಾಡಿಸಲಾಗಿದೆ. ನ್ಯಾಯಾಲಯದಿಂದ ಕೈಗೆತ್ತಿಕೊಂಡಿದ್ದ 1090 ಪ್ರಕರಣ ಪೈಕಿ, ₹ 82,26,028 ಮೌಲ್ಯದ 837 ಪ್ರಕರಣದಲ್ಲಿ ಗ್ರಾಹಕರು ರಾಜಿಮಾಡಿಕೊಂಡಿದ್ದಾರೆ. ಇವುಗಳಲ್ಲಿ ಮೋಟಾರು ಅಪಘಾತ, ಬ್ಯಾಂಕ್ ಸಾಲ, ವಿವಾಹ ವಿಚ್ಚೇದನ, ಆಸ್ತಿ ವಿವಾದ ಒಳಗೊಂಡಿವೆ ಎಂದು ನ್ಯಾಯಾಲಯ ಮೂಲಗಳು ತಿಳಿಸಿವೆ. ಲೋಕಅದಾಲತ್ ನಲ್ಲಿ ಹಿರಿಯ ವಕೀಲರುಗಳು, ಕಿರಿಯ ವಕೀಲರು, ವಕೀಲರ ಸಂಘದ ಪದಾಧಿಕಾರಿಗಳಿದ್ದರು.
Leave a comment