Home ಹರಪನಹಳ್ಳಿ :  ಪಿ.ಟಿ.ಪರಮೇಶ್ವರ ನಾಯ್ಕಗೆ ವಾಲ್ಮೀಕಿ ಸಮಾಜದಿಂದ ಸನ್ಮಾನ
Homeಸುದ್ದಿಗಳು

ಹರಪನಹಳ್ಳಿ :  ಪಿ.ಟಿ.ಪರಮೇಶ್ವರ ನಾಯ್ಕಗೆ ವಾಲ್ಮೀಕಿ ಸಮಾಜದಿಂದ ಸನ್ಮಾನ

Share
PTP
Share

ಹರಪನಹಳ್ಳಿ: ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ, ಹಡಗಲಿಯ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ನಗರದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಗುರುವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ನಗರದ ವಾಲ್ಮೀಕಿ ನಗರದಲ್ಲಿರುವ ಹಾಲಸ್ವಾಮಿ ಮಠದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಹಾಲಸ್ವಾಮಿ ಮಠದ ಶ್ರೀ ವೀರಯ್ಯ ಹಾಲಸ್ವಾಮೀಜಿ ಹಾಗೂ ದೈವಸ್ಥರ ಸಮ್ಮುಖದಲ್ಲಿ ಪರಮೇಶ್ವರ ನಾಯ್ಕ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ನೂತನ ಹುದ್ದೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಂತೆ ಮುಖಂಡರು ಶುಭಕೋರಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಪ್ರಮುಖರಾದ ಇಜಾರಿ ಮಹಾವೀರ, ಬೇಲೂರು ಅಂಜಪ್ಪ, ಬಾಲೇನಹಳ್ಳಿ ಎಸ್.ರೇವಣಸಿದ್ದಪ್ಪ ಉಪಸ್ಥಿತರಿದ್ದರು. ಮುಖಂಡರಾದ ಪಟ್ನಾಮದ ಹಾಲಸಿದ್ದಪ್ಪ, ರಾಯದುರ್ಗದ ವಾಗೀಶ, ಗಿಡ್ಡಳ್ಳಿ ನಾಗರಾಜ, ದ್ಯಾಮಜ್ಜಿ ದಂಡ್ಯೆಪ್ಪ, ಗುಂಡಿ ಮಂಜುನಾಥ, ನಿಟ್ಟೂರು ದೊಡ್ಡಹಾಲಪ್ಪ, ಕಮ್ಮಾರ ಸಣ್ಣಹಾಲಪ್ಪ, ಟಿ.ಕೆಂಚಪ್ಪ, ವರಕೇರಿ ರಮೇಶ, ತಳವಾರ ಹಾಲೇಶ, ಕಿಂದ್ರಿ ಹನುಮಂತಪ್ಪ, ಕಾಗೇರ ತಿಮ್ಮಪ್ಪ, ಗಾಟಿನ ಪರಸಪ್ಪ, ತಳವಾರ ವೆಂಕಟೇಶ್, ಎಚ್.ಕೆ.ಅರ್ಜುನ, ಹಳೇಬ್ಯಾಡರ ಕರಿಬಸಪ್ಪ, ಮಣಿಗಾರ ಅಂಜಿನಿ, ಆಲೂರು ಶ್ರೀನಿವಾಸ, ನಿಟ್ಟೂರು ಬಸವರಾಜ, ಕವಸರ ವಿಜಯಕುಮಾರ್ ಹಾಗೂ ಸುನೀಲ್ ಶಂಕರನಹಳ್ಳಿ ಭಾಗವಹಿಸಿದ್ದರು.

ಮುಸ್ಲಿಂ ಸಮಾಜದ ಅಂಜುಮನ್ ಮಾಜಿ ಅಧ್ಯಕ್ಷ ಸಿ.ಜಾವೀದ್, ಮುಖಂಡರಾದ ಎ.ಮೂಸಸಾಹೇಬ್, ಎಂ.ಜಾಪರ್ ಸಾಹೇಬ್, ಅಬ್ದುಲ್ ಶುಕ್ರುಸಾಹೇಬ್, ಶಿರಾಜ್, ಅಹಮದ್, ಜಬೀ ಜಾಲಾಲಿ, ಮಂಡಕ್ಕಿ ಸುರೇಶ, ಪಿ.ಪರಶುರಾಮ, ಸೆಳ್ಳಮ್ಮಿ ದುರುಗಪ್ಪ, ಜಲಾಲಿ ಬುಡೇನ್ ಸಾಹೇಬ್, ಗುಡೇಕೋಟಿ ಕೇರಿ ರಾಜಪ್ಪ, ಮುತ್ತಿಗಿ ಜಂಬಣ್ಣ, ಪಿ.ಬಿ.ಗೌಡ್ರು, ಚಿಕ್ಕೇರಿ ಪಾಲಕ್ಷಪ್ಪ, ಗೋಲ್ಡನ್ ಬೀಡಿ ಜಾವೀದ್, ದಾವಣಗೆರೆ ಚೌಡಪ್ಪ, ಕೆ.ರಿಯಾಜ್, ಬಡಿಗಿ ನಂದೀಶ ಆಚಾರಿ, ಹೊಂಬಳಗಟ್ಟಿ ನಸರುಲ್ಲಾ, ಬಿ.ಅಹಮದ್, ವೇದುನಾಯ್ಕ, ದ್ಯಾಮಜ್ಜಿ ಹನುಮಂತಪ್ಪ, ನಂದೀಶನಾಯ್ಕ, ರಾಯದುರ್ಗದ ಮಂಜುನಾಥ, ಕಾನಹಳ್ಳಿ ರುದ್ರಪ್ಪ ಇತರರು ಉಪಸ್ಥಿತರಿದ್ದರು.

 

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.