ಹರಪನಹಳ್ಳಿ : ಭಾರತ ಗಣರಾಜ್ಯವಾಗಲು ಶ್ರಮಿಸಿದ ಮಹಾನ್ ಚೇತನಗಳನ್ನು ನೆನಪು ಮಾಡಿಕೊಳ್ಳುವುದು ಭಾರತೀಯ ಹೊಣೆಗಾರಿಕೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಜಿ.ಮನೋಹರ ತಿಳಿಸಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಭವನದ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯಗಳಿಗೆ ದಕ್ಕೆಯಾಗದ ರೀತಿಯಲ್ಲಿ ಎಲ್ಲರೂ ಬದುಕು ಕಟ್ಟಿಕೊಳ್ಳಬೇಕು. ಈ ನಾಡಿಗೆ ಸಂವಿಧಾನ ಜಾರಿಗಳಿಸಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ. ಗಣರಾಜ್ಯವಾಗಲು ಶ್ರಮಿಸಿದ ನಾಯಕರನ್ನು ಸದಾ ಸ್ಮರಿಸೋಣ ಎಂದರು.

ಕಾರ್ಯದರ್ಶಿ ಬಿ.ಸೂರ್ಯನಾಯ್ಕ ಧ್ವಜವಂದನೆ ಸಲ್ಲಿಸಿದರು. ರಾಜ್ಯ ಪರಿಷತ್ ಸದಸ್ಯರಾದ ಎಂ.ಶರೀಫ್, ಪೂಜಾರ ಮಂಜುನಾಥ, ಉಪಾಧ್ಯಕ್ಷ ಸಂಗಯ್ಯ, ಶಫಿವುಲ್ಲಾ, ಹುಸೇನ್ ಭಾಷ ಇತರರಿದ್ದರು.
Leave a comment