ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಹೋಬಳಿ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯಗಳ ವಿರೋಧಿ ಆಚರಣೆ ಮತ್ತು ಸಂಕಲ್ಪ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ್ ಅವರು, ‘ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮ, ಕುಟುಂಬದ ಸ್ವಾಸ್ಥ್ಯ ಕುರಿತು ಅರಿವು ಮೂಡಿಸಿದರು’. ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಹಾಲೇಶ್ ಉದ್ಘಾಟಿಸಿದರು. ಸದಸ್ಯ ಸಿ.ಮಂಜುನಾಥ, ಬಿ.ಪರಸಪ್ಪ, ಟಿ.ಇ.ಪಕ್ಕೀರಾಜ್, ಕಂಚಿಕೇರಿ ವಲಯ ಮೇಲ್ವಿಚಾರಕಿ ದ್ಯಾಮಕ್ಕ, ಸೇವಾ ಪ್ರತಿನಿಧೀ ಶ್ವೇತಮ್ಮ, ಮುಖ್ಯ ಶಿಕ್ಷಕ ಜಿ.ಕೃಷ್ಣಮೂರ್ತಿ, ಹಿರಿಯ ಶಿಕ್ಷಕರಾದ ನೀಲಪ್ಪ, ಮಂಜುನಾಯ್ಕ ಇದ್ದರು.
Leave a comment