ವಿಜಯನಗರ(ಹೊಸಪೇಟೆ) : ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬರ ಹಾಗೂ ಮಳೆ ಅಭಾವದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳ ಪರಿಸ್ಥಿತಿಯ ಗಂಭೀರತೆಯನ್ನು ಕೃಷಿ ಕ್ಷೇತ್ರದ ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಅಧಿಕಾರಿಗಳೊಂದಿಗೆ ಮಂಗಳವಾರ (ಜುಲೈ 21) ಬೆಳಿಗ್ಗೆಯಿಂದಲೇ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ಕೃಷಿ ಸ್ಥಿತಿಗತಿ ಕುರಿತು ಪರಿಶೀಲನೆ ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಬೆಳಗ್ಗೆ 9 ರಿಂದ ವಿವಿಧೆಡೆ ಜಿಲ್ಲಾ ಪ್ರವಾಸ : ಹೊಸಪೇಟೆಯಿಂದ ಬೆಳಗ್ಗೆ 9 ಗಂಟೆಗೆ ಅಧಿಕಾರಿಗಳ ತಂಡದೊಂದಿಗೆ ಪ್ರವಾಸ ಆರಂಭವಾಗಿ ನಂದಿಬಂಡಿಗೆ ಗ್ರಾಮದಲ್ಲಿನ ಜೋಳ ಹಾಗೂ ಮೆಕ್ಕೆಜೋಳ ಬೆಳೆಗಳನ್ನು ವೀಕ್ಷಿಸಿ ರೈತರ ಸಂಕಷ್ಟಗಳನ್ನು ಅಲಿಸುವರು. ನಂತರ ಬೆಳಿಗ್ಗೆ 10.15 ರಿಂದ 10.45 ರವರೆಗೆ ಹೂವಿನಹಡಗಲಿ ತಾಲೂಕಿನ ಹಂಪಾಪಟ್ಟಣಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳ ಸ್ಥಿತಿಗತಿ ಪರಿಶೀಲಿಸುವರು.
ಬೆಳಿಗ್ಗೆ 11ರಿಂದ 11.30 ರವರೆಗೆ ಮಾದೂರು ಗ್ರಾಮದಲ್ಲಿ ಕೃಷಿ ಜಮೀನುಗಳಿಗೆ ಭೇಟಿ ನೀಡುವರು. ಬೆಳಿಗ್ಗೆ 11.30 ರಿಂದ11.45 ಹಗರಿಬೊಮ್ಮನಹಳ್ಳಿಯಲ್ಲಿ ವಿವಿಧ ಬೆಳೆಗಳ ಪರಿಶೀಲನೆ ಹಾಗೂ ಮಧ್ಯಾಹ್ನ 12.15 ರಿಂದ 12.45 ರವರೆಗೆ ಹಡಗಲಿ ತಾಲೂಕಿನ ಇಟಗಿಯಲ್ಲಿ ಸೂರ್ಯಕಾಂತಿ, ಈರುಳ್ಳಿ ಮತ್ತು ಮೆಕ್ಕೆಜೋಳ ಬೆಳೆಗಳನ್ನು ಖುದ್ದಾಗಿ ವೀಕ್ಷಣೆ ಮಾಡುವರು.
ಮಧ್ಯಾಹ್ನ 1.15 ರಿಂದ 1.45 ಹರಪನಹಳ್ಳಿ ತಾಲೂಕಿನ ಮೈದೂರು ಮತ್ತು ಚಿಗಟೇರಿಯಲ್ಲಿ ಮೆಕ್ಕೆಜೋಳ ಮತ್ತಿತರ ಬೆಳೆಗಳ ತಪಾಸಣೆ ಮಾಡಲಿದ್ದಾರೆ. ಮಧ್ಯಾಹ್ನ 2 ರಿಂದ 3 ಪ್ರವಾಸ ಮಂದಿರದಲ್ಲಿ ಮಧ್ಯಾಹ್ನದ ಉಪಹಾರ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.
ನಂತರ ಮಧ್ಯಾಹ್ನ 3.15 ರಿಂದ 3:l.30 ಹರಪನಹಳ್ಳಿ ತಾಲೂಕಿನ ನಿಚಾಪುರದಲ್ಲಿ ಮೆಕ್ಕೆಜೋಳ ಬೆಳೆ ಹಾಗೂ ಸಂಜೆ 4.10 – ರಿಂದ 4.40 ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿಯಲ್ಲಿ ಸೂರ್ಯಕಾಂತಿ ಹಾಗೂ ಮೆಕ್ಕೆಜೋಳ ಬೆಳೆ ವೀಕ್ಷಿಸಿ ರೈತರ ಕುಂದುಕೊರತೆ ಸ್ವೀಕರಿಸಿದ ಅವರು ಸಂಜೆ 5.30 ರಿಂದ 5.45 ಅಮ್ಮನಕೇರಿಯಲ್ಲಿ ಮೆಕ್ಕೆಜೋಳ ಬೆಳೆ ಪರಿಶೀಲಿಸಿ ರೈತರೊಂದಿಗೆ ಸುದೀರ್ಘ ಚರ್ಚೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.
- Agriculture News Karnataka
- Crop Damage Inspection
- DC Kavitha Mannikeri
- Drought Situation
- hagaribommanahalli
- Harapanahalli
- Hoovina Hadagali
- Hospet
- Karnataka Farmers
- Kotturu
- Monsoon Failure
- VIJAYANAGARA
- ಕರ್ನಾಟಕ ಕೃಷಿ
- ಕವಿತಾ ಮನ್ನಿಕೇರಿ
- ಕೃಷಿ ಇಲಾಖೆ
- ಕೊಟ್ಟೂರು
- ಜಿಲ್ಲಾಧಿಕಾರಿ ಪ್ರವಾಸ
- ಬರ ಪರಿಸ್ಥಿತಿ
- ಬೆಳೆ ಹಾನಿ ಪರಿಶೀಲನೆ
- ಮುಂಗಾರು ಅಭಾವ
- ರೈತರ ಸಂಕಷ್ಟ
- ವಿಜಯನಗರ
- ಹಗರಿಬೊಮ್ಮನಹಳ್ಳಿ
- ಹರಪನಹಳ್ಳಿ
- ಹೂವಿನಹಡಗಲಿ
- ಹೊಸಪೇಟೆ
Leave a comment