ಹರಪನಹಳ್ಳಿ : ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಬಹುದೊಡ್ಡದು ಎಂದು ಪುರಸಭೆ ಮಾಜಿ ಅಧ್ಯಕ್ಷ, ಸಮಾಜಸೇವಕ ಎಚ್.ಎಂ.ಅಶೋಕ ಹರಾಳು ಅವರು ಅಭಿಪ್ರಾಯಪಟ್ಟರು.
ನಗರದ ಬಾಬು ಜಗಜೀವನ್ ರಾಮ್ ಸಭಾ ಭವನದಲ್ಲಿ ಸೊಮವಾರ ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಮಾಜ ಸೇವಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಪತ್ರಿಕಾ ರಂಗ ಪಾರದರ್ಶಕವಾಗಿರಬೇಕು.ನಾಲ್ಕನೇ ಸ್ತಂಭವಾಗಿರುವ ಮಾಧ್ಯಮ ಕ್ಷೇತ್ರ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು, ಜನರು ಮತ್ತು ಸರ್ಕಾರದ ನಡುವೆ ಉತ್ತಮ ಸೇತುವೆಯಾಗಿ ಕೆಲಸ ಮಾಡುತ್ತಿರುವ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳನ್ನು ಪ್ರತಿಯೊಬ್ಬರು ಬೆಂಬಲಿಸಬೇಕು. ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರ್ಕಾರ ಭದ್ರತೆ ಒದಗಿಸುವ ಜರೂರಿದೆ ಎಂದರು.
ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಸಮಾಜದ ಆಗುಹೋಗುಗಳ ಬಗ್ಗೆ ಸತ್ಯ ಘಟನೆಗಳನ್ನು ತೋರಿಸುವ ಮಾದ್ಯಮ ಕ್ಷೇತ್ರ ಕನ್ನಡಿ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಶುಭ ಹಾರೈಸಿ ತೆರಳಿದರು.
ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಸರ್ಕಾರವನ್ನೆ ಬೀಳಿಸುವ ಶಕ್ತಿ ಪತ್ರಿಕೆಗಳಿಗೆ ಇದೆ ಎಂದು ತೋರಿಸಿಕೊಟ್ಟವರು ಪಿ.ಲಂಕೇಶ್. ಅನ್ಯಾಯ ಕಂಡಾಗ ಅದನ್ನು ಖಂಡಿಸುವ ಶಕ್ತಿ ಲೇಖನಿಗೆ ಮಾತ್ರವಿದೆ. ಊಹಾಪೋಹಗಳಿಂದ ಜನರನ್ನು ದಾರಿ ತಪ್ಪಿಸುತ್ತಿರುವ ಮಾಧ್ಯಮಗಳ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ ಡಿ ಅಣ್ಣಪ್ಪ. ಸಮಾಜದ ಸೇವೆಯಲ್ಲಿ ತೊಡಗಿರುವ ಪತ್ರಕರ್ತರಿಗೆ ಜೀವನೋಪಾಯಕ್ಕೆ ಕನಿಷ್ಟ ಸೌಲಭ್ಯವನ್ನಾದರೂ ಸರ್ಕಾರ ಒದಗಿಸಬೇಕು ಎಂದರು.
ಅಂಜುಮನ್ ಸಮಿತಿ ಅಧ್ಯಕ್ಷ ಎನ್ ಎಂ ನೂರ್ ಅಹ್ಮದ್ ಮಾತನಾಡಿ. ವಿಶ್ವದಲ್ಲಿ ಚಾಕುವಿಗಿಂತ ಹರಿತವಾದ ಲೇಖನಿ ಕಾರ್ಯನಿರ್ವಹಿಸುತ್ತಿದೆ, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬರವಣಿಗೆ ಮೂಲಕ ಜಾಗೃತಿ ಮೂಡಿಸಿ ಹೋರಾಟ ಮಾಡಿವೆ ಎಂದು ಸ್ಮರಿಸಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ಸಮಾಜ ಸೇವಕ ಪ್ರಶಸ್ತಿಯನ್ನು ಎಚ್.ಎಂ.ಅಶೋಕ ಹರಾಳು, ಉತ್ತಮ ವೈದ್ಯ ಪ್ರಶಸ್ತಿ ಬಿ.ಬಿ.ಹೊಸೂರಪ್ಪ, ದಕ್ಷ ಅಧಿಕಾರಿ ಪ್ರಶಸ್ತಿ ಮಾಲತೇಶ್ ಮುದ್ದಜ್ಜಿ, ಶಿಕ್ಷಕ ರತ್ನ ಪ್ರಶಸ್ತಿ ಟಿ.ಎಂ ರಾಜಶೇಖರ್, ಆದರ್ಶ ದಂಪತಿ ಪ್ರಶಸ್ತಿ ಎಚ್.ಮಲ್ಲಿಕಾರ್ಜುನ್ ಮತ್ತು ಸಪ್ನ, ಉತ್ತಮ ಸೇವಕ ಪ್ರಶಸ್ತಿಯನ್ನು ಪೂಜಾರ್ ಮರಿಯಪ್ಪ ಅವರಿಗೆ ಪ್ರಧಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಿವೈಎಸ್ಪಿ ಡಾ. ಸಂತೋಷ್ ಚವ್ಹಾಣ್ , ಶಶಿಧರ ಪೂಜಾರ, ಗೊಂಗಡಿ ನಾಗರಾಜ್, ಎನ್.ಜಿ.ಮನೋಹರ, ಕೆ.ಉಚ್ಚಂಗೆಪ್ಪ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಅಧ್ಯಕ್ಷ ನಾಗೇಂದ್ರಪ್ಪ ಅಧ್ಯಕ್ಷತೆವಹಿಸಿದ್ದರು. ಕೆ.ಪ್ರಕಾಶ್, ದುರುಗೇಶ್, ಹುಲಿಕಟ್ಟೆ ಚಂದ್ರಪ್ಪ, ಒ.ರಾಮಪ್ಪ, ಮೂಸಾಸಾಬ್, ಅಬ್ದುಲ್ ರೆಹಮಾನ್, ಟಿ.ವೆಂಕಟೇಶ್, ಮಕರಬ್ಬಿ ಶರೀಪ್, ಮಂಜುನಾಥ ಪೂಜಾರ, ವಿಕ್ರಂ ಟಿ, ಜಯಲಕ್ಷ್ಮಿ ಇತರರಿದ್ದರು.
Leave a comment