Home ಹರಪನಹಳ್ಳಿಯಲ್ಲಿ ಬಿಜೆಪಿ ವತಿಯಿಂದ ವಿಜೃಂಭಣೆಯ ‘ಹರ್ ಘರ್ ತಿರಂಗ’ ಬೈಕ್ ರ್ಯಾಲಿ
Homeಸುದ್ದಿಗಳು

ಹರಪನಹಳ್ಳಿಯಲ್ಲಿ ಬಿಜೆಪಿ ವತಿಯಿಂದ ವಿಜೃಂಭಣೆಯ ‘ಹರ್ ಘರ್ ತಿರಂಗ’ ಬೈಕ್ ರ್ಯಾಲಿ

Share
Share

ಹರಪನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ನಗರದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬೈಕ್ ರ್ಯಾಲಿ ನಡೆಸಿತು. ನಗರದ  ಹರಿಹರ ರಸ್ತೆ ಹಿರೆಕೆರೆ ವೃತ್ತದಿಂದ  ಆರಂಭವಾದ ಈ ಬೈಕ್  ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ ವೃತ್ತ ತಲುಪಿತು. ಕಾರ್ಯಕರ್ತರು ಬೈಕ್‌ಗಳಿಗೆ ತ್ರಿವರ್ಣ ಧ್ವಜ ಕಟ್ಟಿ, ದೇಶಭಕ್ತಿ ಘೋಷಣೆಗಳೊಂದಿಗೆ ಸಂಚರಿಸಿ ನಗರದ ಜನತೆಯ ಗಮನ ಸೆಳೆದರು.

ಬಿಜೆಪಿ  ಮಂಡಲ ಅಧ್ಯಕ್ಷ ಕೆ. ಶೇಖರಪ್ಪ, ಮುಖಂಡರಾದ ಕೊಟ್ರೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಎನ್.ಜಿ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಉದಯಕುಮಾರ್, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಆರ್. ಮಂಜುನಾಥ್ ನಾಯ್ಕ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ದ್ಯಾಮಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ. ಸಂಗಮೇಶ , ಪ್ರಧಾನ ಕಾರ್ಯದರ್ಶಿ ಪಂಪಾನಾಯ್ಕ ಮಾತನಾಡಿದರು.

ಉಪಾಧ್ಯಕ್ಷ ಕಲ್ಲನಗೌಡ, ಗಂಗಾನಾಯ್ಕ, ಬಿಎಲ್‍ಎ ಸೂರ್ಯನಾಯ್ಕ, ಕಾರ್ಯದರ್ಶಿ ಪ್ರಸನ್ನ, ಎಂ.ಮಲ್ಲೇಶ್, ಮಹಾಂತೇಶ, ಮಾರುತಿ, ಟಿ.ಮನೋಜ್, ಕೊಟ್ರಯ್ಯ, ಪ್ರಕಾಶ್, ಮಂಜುನಾಥ ಹುಣಸಿಹಳ್ಳಿ, ಲಿಂಗರಾಜ್, ಕಿರಣ್ ಶ್ಯಾನಬೋಗ್, ತರಕಾರಿ ಹನುಮಂತಪ್ಪ, ಜಾವಿದ್, ವಿನಯ್, ರವಿ ಸೇರಿದಂತೆ ಅನೇಕರಿದ್ದರು. ಬಿಜೆಪಿ ಮಂಡಲ ಪದಾಧಿಕಾರಿಗಳು ಶುಕ್ರವಾರ ಬೈಕ್ ರ್ಯಾಲಿ ನಡೆಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಕೆ. ಶೇಖರಪ್ಪ, ಮುಖಂಡರಾದ ಕೊಟ್ರೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಎನ್.ಜಿ. ಮಂಜುನಾಥ್, ಜಿಲ್ಲಾ  ಕಾರ್ಯದರ್ಶಿ ಉದಯಕುಮಾರ್, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಆರ್. ಮಂಜುನಾಥ್ ನಾಯ್ಕ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ದ್ಯಾಮಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ. ಸಂಗಮೇಶ , ಪ್ರಧಾನ ಕಾರ್ಯದರ್ಶಿ ಪಂಪಾನಾಯ್ಕ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
SOGI
Homeಕಲೆಸುದ್ದಿಗಳು

ಸೋಗಿಯಲ್ಲಿ ವಿಜೃಂಭಿಸಿದ ಜಾನಪದ ಸೊಬಗು

ಹೂವಿನಹಡಗಲಿ : ತಾಲ್ಲೂಕಿನ ಸೋಗಿ ಗ್ರಾಮದಲ್ಲಿ  ವಿಜಯನಗರ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಅನುದಾನದಡಿ,...

Homeಸುದ್ದಿಗಳು

“ಶ್ರಮಿಕನಿಂದ ಧ್ವಜಾರೋಹಣ”

ಹರಪನಹಳ್ಳಿ : ಪಟ್ಟಣದ ಹೊರ ಹೊಲದಲ್ಲಿರುವ ಪ್ರಕೃತಿ ವಿದ್ಯಾ ಸಂಸ್ಥೆಯ ಪರ್ಲ್ ಪಬ್ಲಿಕ್ ಶಾಲೆಯಲ್ಲಿ 80ನೇ...

Homeಸುದ್ದಿಗಳು

ವ್ಯಕ್ತಿ ಕಾಣೆ ಪತ್ತೆಗೆ ಮನವಿ

ವಿಜಯನಗರ : ತಾಲೂಕಿನ ಚಿತ್ರಕೇರಿ 34ನೇ ವಾರ್ಡ್ ನಿವಾಸಿ ಎಸ್. ಉಮೇಶ ತಂದೆ ಲೇಟ್ ಸೋಮಣ್ಣ...

Homeಸುದ್ದಿಗಳು

ಶಿಕ್ಷಕನಿಗೆ ನಿಂದನೆ: ಶಾಲಾ ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಆಗ್ರಹ

ಹರಪನಹಳ್ಳಿ: ತಾಲ್ಲೂಕಿನ ಗುಂಡಗತ್ತಿ ಗ್ರಾಮದ ಶ್ರೀ ವೆಂಕಟೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿ ಅವರು ಶಾಲೆಯ ದೈಹಿಕ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.