Home ಸುದ್ದಿಗಳು ಅರ್ಹ ರೈತರಿಗೆ ಕೃಷಿ ಉಪಕರಣ ಕಲ್ಪಿಸಲು ಆಗ್ರಹ
ಸುದ್ದಿಗಳು

ಅರ್ಹ ರೈತರಿಗೆ ಕೃಷಿ ಉಪಕರಣ ಕಲ್ಪಿಸಲು ಆಗ್ರಹ

Share
harapanahalli farmers protest
Share

ಹರಪನಹಳ್ಳಿ : ಕೃಷಿ ಇಲಾಖೆ ಯೋಜನೆಯ ಉಪಕರಣಗಳನ್ನು ಅರ್ಹ ರೈತ ಫಲಾನುಭವಿಗಳಿಗೆ ಕಲ್ಪಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಕಾರ್ಯಕರ್ತರು ಶನಿವಾರ ನಗರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸಹಾಯಕ ಕೃಷಿ ನಿರ್ದೇಶಕ ವಿ.ಸಿ.ಉಮೇಶ್ ಅವರಿಗೆ ಮನವಿ ಸಲ್ಲಿಸಿದರು. ಅಖಿತ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ಸಿಪಿಐ ತಾಲ್ಲೂಕು ಕಾರ್ಯದರ್ಶಿ ರಮೇಶ್ ನಾಯ್ಕ, ತಾಲ್ಲೂಕು ಉಪಾಧ್ಯಕ್ಷ ಹನುಮಂತ ನಾಯ್ಕ, ಹರಿಯಮ್ಮನಹಳ್ಳಿ ಬಸವರಾಜ್, ಹಗರಿ ಗುಡಿಹಳ್ಳಿ ಶಿವರಾಮ್, ಕೆರೆಗುಡಿಹಳ್ಳಿ ದುರ್ಗಪ್ಪ, ಬಳಿಗನೂರು ಮಲ್ಲೇಶ್, ಮತ್ತಿಹಳ್ಳಿ ಭರಮಪ್ಪ, ಮಲ್ಲೇಶಪ್ಪ, ಎಲ್.ತಿಂದಪ್ಪ ಇದ್ದರು.

ರಾಜ್ಯ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸೌಲಭ್ಯ ನೀಡಲಾಗುತ್ತಿದೆ. ಕೃಷಿ ಉಪಕರಣಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಹ ರೈತರನ್ನು ಆಯ್ಕೆ ಮಾಡಲಾಗುತ್ತಿಲ್ಲ. ಟ್ರಾಕ್ಟರ್ ಚಾಲಿತ ಉಪಕರಣ, ಒಕ್ಕಣೆ ಯಂತ್ರ, ಸಸ್ಯ ಸಂರಕ್ಷಣಾ ಉಪಕರಣಗಳನ್ನು ಒಮ್ಮೆ ಪಡೆಯುವ ರೈತ, ಪುನಃ 7 ವರ್ಷದ ನಂತರ ಪಡೆಯುವ ನಿಬಂಧನೆ ಇರಿಸಲಾಗಿದೆ. ಪರಿಶಿಷ್ಟ ಪಂಗಡದ ರೈತರಿಗೆ 5 ವರ್ಷ, ಪರಿಶಿಷ್ಟ ಜಾತಿಯವರಿಗೆ 3 ವರ್ಷ ಅವಕಾಶ ನೀಡಲಾಗಿದೆ. ತಾಡಪಾಲುಗಳನ್ನು ಎಲ್ಲ ವರ್ಗದ ರೈತರಿಗೆ 3 ವರ್ಷ ನಿರ್ಬಂಧ ವಿಧಿಸಲಾಗಿದೆ. ಇದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಅರಸೀಕೆರೆಯಲ್ಲಿ 6ನೇ ತಾಲ್ಲೂಕು ಸಮ್ಮೇಳನಕ್ಕೆ ಸಮ್ಮತಿ

ಹರಪನಹಳ್ಳಿ : ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮೀಣ ಪ್ರದೇಶಕ್ಕೆ ಪಸರಿಸುವ ನಿಟ್ಟಿನಲ್ಲಿ ಅರಸೀಕೆರೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ...

Homeಸುದ್ದಿಗಳು

ಮಾದರ ಮಹಾಸಭಾ ಸದಸ್ಯತ್ವ ನೊಂದಣಿಗೆ ಚಾಲನೆ

ಹರಪನಹಳ್ಳಿ : ರಾಜ್ಯಾಧ್ಯಂತ ಮಾದರ ಮಹಾಸಭಾ ಸದೃಢವಾಗಿ ಕಟ್ಟಲು ಸದಸ್ಯತ್ವ ನೊಂದಾಣಿ ಆರಂಭಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ...

Homeಸುದ್ದಿಗಳು

ಅಂಚೆ ಇಲಾಖೆಯಿಂದ ಆಧಾರ್ ಸೇವೆಗಳ ವಿಸ್ತರಣೆ

ವಿಜಯನಗರ : ಜಿಲ್ಲೆಯ ಸಾರ್ವಜನಿಕರಿಗೆ ಸುಲಭ, ಸುರಕ್ಷಿತ ಹಾಗೂ ಆಧಾರ್ ನವೀಕರಣ ಸೇರಿದಂತೆ ವಿವಿದ ಆಧಾರ್...

Homeಸುದ್ದಿಗಳು

ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ

ಕಲಬುರಗಿ: ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ ವತಿಯಿಂದ ಕೊತ್ತನೂರಿನ ಸೇಂಟ್ ಮೇರಿಸ್ ಶಾಲೆಯ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.