ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಗ್ರಾಮದ ಪೊಲೀಸ್ ಠಾಣೆ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ತಿಕೋತ್ಸವವನ್ನು ಠಾಣೆ ಪೊಲೀಸರು ಶನಿವಾರ ಅದ್ದೂರಿಯಾಗಿ ಆಚರಿಸಿದ್ದಾರೆ.ಆಂಜನೇಯ ದೇವಸ್ಥಾನಕ್ಕೆ ವಿವಿಧ ವಿದ್ಯುತ್ ದೀಪಾಲಂಕಾರ, ಪುಷ್ಪಾರ್ಚನೆ, ಬಾಳೆಕಂಬ, ಮಾವಿನತೋರಣ, ತೆಂಗಿನಗರಿಗಳ ಅಲಂಕಾರ, ರಂಗೋಲಿ,ಆಂಜನೇಯ ಸ್ವಾಮಿಗೆ ವಿವಿಧ ಬಣ್ಣಗಳಿಂದ ಅಲಂಕಾರ, ನೈವೇದ್ಯ ಸಲ್ಲಿಸಿದರು. ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ದೀಪ ಹಚ್ಚುವುದರ ಮೂಲಕ ಅದ್ದೂರಿಯಾಗಿ ಆಂಜನೇಯ ಸ್ವಾಮಿಯ ಕಾರ್ತೀಕೋತ್ಸವ ನೆರವೇರಿಸಿದರು. ಪೂಜೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಠಾಣೆಯ ಪಿಎಸ್ಐ ವಿಜಯ್ ಕೃಷ್ಣ, ಪೊಲೀಸ್ ಸಿಬ್ಬಂದಿಗಳಾದ ಕೂಲಹಳ್ಳಿ ಕೊಟ್ರೇಶ್, ರವಿನಾಯ್ಕ್, ಗೂರ್ಯ ನಾಯ್ಕ್, ದೇವೇಂದ್ರ ನಾಯ್ಕ್, ಹನುಮಂತ, ವೀರಮ್ಮ, ಮುಖಂಡರಾದ ಎ.ಹೆಚ್.ಕೊಟ್ರೇಶ್, ಮಹೇಶ್,ಯೋಗೀಶ್, ಗಣೇಶ್,ಆಕಾಶ್, ನಿಂಗಪ್ಪ, ಗ್ರಾಮಸ್ಥರಿದ್ದರು.
Leave a comment