Home ಅಧಿವೇಶನದಲ್ಲಿ ಸಿಎಂ, ಸಭಾಪತಿ, ವಿರೋಧ ಪಕ್ಷದಿಂದ ಸಂತಾಪ
Home

ಅಧಿವೇಶನದಲ್ಲಿ ಸಿಎಂ, ಸಭಾಪತಿ, ವಿರೋಧ ಪಕ್ಷದಿಂದ ಸಂತಾಪ

Share
Condolences from CM, Speaker, Opposition parties during the session
Share

ಬೆಳಗಾವಿ : ದಾವಣಗೆರೆ ರಾಜ್ಯದ, ದೇಶದ ಗಮನ ಸೆಳೆದಿದೆ ಎಂದರೆ ಅದಕ್ಕೆ ಶಾಮನೂರು ಶಿವಶಂಕರಪ್ಪ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ಸಂತಾಪ ಸೂಚಿಸಿ ಅವರು ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಹಿಂದೆ ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಸಚಿವರಾಗಿದ್ದರು, ಈಗಿನ ಸರ್ಕಾರದಲ್ಲಿ ಅವರೇ ಸ್ವತಃ ತಮ್ಮ ಮಗ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ಕೊಡಿಸಿದರು.

ನಾನು ದಾವಣಗೆರೆ ಹೊರಟರೇ, ಅವರೇ ನನಗೆ ಕರೆ ಮಾಡಿ ಮನೆಗೆ ಊಟಕ್ಕೆ ಕರೆಯುತ್ತಿದ್ದರು. ನನ್ನ ಹುಟ್ಟಿದ ಹಬ್ಬದ ಆಚರಣೆ ಮಾಡಿದಾಗ ಅವರ ದಾವಣಗೆರೆ ಅವರ ಒಡೆತನದ ಜಾಗದಲ್ಲಿ ಆಚರಿಸಿದ್ದರು. ನನಗೆ ನನ್ನ ಜನ್ಮ ದಿನಾಂಕ ಗೊತ್ತಿಲ್ಲ, ನಮ್ಮ ಮೇಷ್ಟ್ರು ಬರೆದಿದ್ದ ದಿನಾಂಕ ಅದು. ಶಿವಶಂಕರಪ್ಪ ಅವರು ಸಹಾಯ ಹಸ್ತ ಗುಣ ಬಹಳ ಇತ್ತು. ಕೊವಿಡ್‌ ಸಂದರ್ಭದಲ್ಲಿ 6 ಕೋಟಿ ಹಣ ಸ್ವಂತ ಖರ್ಚು ಮಾಡಿ, ನೆರವಿಗೆ ಧಾವಿಸಿದ್ದರು. ಅವರು ಅಗಲಿರುವುದು ನಮಗೆ ತುಂಬಾ ನೋವು ತಂದಿದೆ.

ಸಭಾಪತಿ ಯು.ಟಿ.ಖಾದರ್‌ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಸದನದ ಸದಸ್ಯರಾಗಿದ್ದರು. ಅವರು ದಾವಣಗೆರೆಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರೊರ್ವ ಕೊಡುಗೈ ದಾನಿಯಾಗಿದ್ದರು, ಅವರೂ ತಮ್ಮ ತಂದೆಯ ಜೊತೆಗಿನ ಒಡನಾಟವನ್ನು ಸಭಾಪತಿ ಅವರು ಸ್ಮರಿಸಿದರು. ವಿರೋಧ ಪಕ್ಷದ ನಾಯಕ ಆರ್.ಲೋಕೇಶ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುತ್ತಾ, ಶಾಸಕರು, ಸಂಸದರು, ಸಚಿವರಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರ, ಸಮಾಜದ ಕೆಲಸ ಮಾಡುವಾಗ, ವೀರಶೈವ ಮಹಾಸಭಾದ ಬಗ್ಗೆ ನಿಷ್ಠುರವಾಗಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗೆ ಯಾರೂ ಪ್ರತಿರೋಧ ಮಾಡುತ್ತಿರಲಿಲ್ಲ ಎಂದು ಅವರ ಒಡನಾಟವನ್ನು ಸ್ಮರಿಸಿದರು. ಸಚಿವರಾದ ಮುನಿಯಪ್ಪ, ಶಾಸಕ ಸುರೇಶ ಕುಮಾರ, ಬಾಲಕೃಷ್ಣ, ಯು.ಬಿ.ಬಣಕಾರ   ಸೇರಿದಂತೆ ಅನೇಕ ಸಚಿವರು, ಶಾಸಕರು ಶಿವಶಂಕರಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.