ಹರಪನಹಳ್ಳಿ : ತಾಲ್ಲೂಕಿನ ಇ.ಬೇವಿನಹಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇವರ ಕಾರ್ತಿಕೋತ್ಸವ ಸಡಗರ, ಸಂಭ್ರಮದಿಂದ ಕಾರ್ತಿಕೋತ್ಸವ ಜರುಗಿತು
ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಸವೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ನೆರವೇರಿಸಿ, ಹಣತೆ ಬೆಳಗಿ ಸ್ವಾಮಿಗೆ ಭಕ್ತಿ ಸಲ್ಲಿಸಲಾಯಿತು. ಗ್ರಾಮಕ್ಕೆ ಬೇಟಿ ನೀಡಿದ್ದ ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷರೂ ಆಗಿರುವ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಅವರು ಮಾತನಾಡಿ, ದೇವರಲ್ಲಿ ನಂಬಿಕೆ, ಶ್ರದ್ಧೆ ಇರಬೇಕು. ಇದರಿಂದ ಮನುಷ್ಯನಿಗೆ ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.
ಬಳಿಕ ನೀಲಗುಂದ ಗ್ರಾಮದ ವಿವಿದೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಪಾಲ್ಗೊಂಡು ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ ಸಲ್ಲಿಸಲಾಯಿತು. ನೀಲಗುಂದ ಗ್ರಾಮದ ವಿವಿದೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಬೇಲೂರು ಸಿದ್ದೇಶ, ಉಪಾಧ್ಯಕ್ಷ ಎಂ.ಪರಸಪ್ಪ, ನಿರ್ದೇಶಕರಾಗ ಎಚ್. ಮಹೇಶಪ್ಪ, ಎಚ್. ಚೌಡಪ್ಪ, ಶ್ರೀ ಪಿ. ಕೊಟ್ರಗೌಡ, ಡಿ. ಪರಶುರಾಮ, ಎ. ಜ್ಯೋತೇಶ, ಎಲ್. ತಿರುಪತಿ, ವಿ.ಜಿ ರಾಜೇಂದ್ರ ಗೌಡ, ಅಕ್ಕಲ್ ರಾಜಪ್ಪ, ಮುಖಂಡರಾದ ಬೋವಿ ಮಹಾಂತೇಶ, ಭರಮರೆಡ್ಡಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಬೋವಿ ಶಿವಕುಮಾರ, ಸೊಸೈಟಿ ಮಾಜಿ ಅಧ್ಯಕ್ಷ ಎಂ.ಕರಿಬಸಪ್ಪ, ಡಿ.ಶಿವಾನಂದಪ್ಪ, ಕೆ.ಮಲ್ಲಿಕಾರ್ಜುನ, ವೈ.ರೇವಣಸಿದ್ದಪ್ಪ, ಜಿ.ಚನ್ನಬಸಪ್ಪ, ಹಾವೇರಿ ರಾಜಪ್ಪ ಇದ್ದರು.
