ವಿಜಯನಗರ (ಹೊಸಪೇಟೆ) : ಪ್ರಸಕ್ತ ಸಾಲಿನ ರಾಜ್ಯವಲಯದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿಯ ಆಯ್ದ ಮೀನುಗಾರರು ಮತ್ತು ಮಾರಾಟಗಾರರಿಗೆ ನಾಲ್ಕು ವಾಹನ ಚಕ್ರ ಖರೀದಿಸಲು ಶೇ.50ರಷ್ಟುಅಥವಾ ಗರಿಷ್ಟ ರೂ.3 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಆಸಕ್ತ ಅರ್ಹ ಫಲಾನುಭವಿಗಳು ಇದೇ ಫೆಬ್ರವರಿ 16ರೊಳಗೆ ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ, ಹೂವಿನಹಡಗಲಿ ಮೀನುಗಾರಿಕೆ ಇಲಾಖೆ ಕಚೇರಿ ದೂರವಾಣಿ ಸಂಖ್ಯೆ 9620177588, ಕೂಡ್ಲಿಗಿ, ಹೆಚ್.ಬಿ.ಹಳ್ಳಿ, ಕೊಟ್ಟೂರು ತಾಲ್ಲೂಕಿನವರು 7349711866 ಹಾಗೂ ಹರಪನಹಳ್ಳಿ ಮೊ. ಸಂಖ್ಯೆ 8217725319 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment