ಹರಪನಹಳ್ಳಿ : ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಂಘಟಿತವಾಗಿ ಒಗ್ಗಟ್ಟು ಕಾಪಾಡಿಕೊಳ್ಳಬೇಕಾಗಿದೆ ಎಂದು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ತಿಳಿಸಿದರು.
ತಾಲ್ಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಒಳಗಿನ ಮಠದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹರಿಹರ ಪಂಚಮಸಾಲಿ ಪೀಠದಲ್ಲಿ ಜ.15ರಂದು ಮಕರ ಸಂಕ್ರಾಂತಿ ನಿಮಿತ್ತ 8ನೇ ಹರಜಾತ್ರೆ ಆಯೋಜಿಸಲಾಗಿದೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹರಜಾತ್ರೆ ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು. ಪೀಠಕ್ಕೆ ಪಂಚಮಸಾಲಿ ಸಮಾಜ ಬೆನ್ನೆಲುಬಾಗಿದೆ. ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಉಚಿತ ಹಾಸ್ಟಡೆಲ್ ವ್ಯವಸ್ಥೆ, ವಸತಿ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ವಧು-ವರ ಸಮಾವೇಶಕ್ಕೆ ಸಿದ್ದತೆ ನಡೆದಿದೆ ಎಂದು ಹೇಳಿದರು.

ತಾಲ್ಲೂಕು ಅಧ್ಯಕ್ಷ ಬೆಟ್ಟನಗೌಡ ಮಾತನಾಡಿ, ಪಂಚಮಸಾಲಿ ಪೀಠ ಸ್ಥಾಪನೆಗೆ ಹರಪನಹಳ್ಳಿ ತಾಲ್ಲೂಕಿನ ಪಂಚಮಸಾಲಿ ಸಮಾಜ ಬಹುದೊಡ್ಡ ಕೊಡುಗೆ ನೀಡಿದೆ. ಹರ ಜಾತ್ರೆಗೂ ಹೆಚ್ಚಿನ ಸಂಖ್ಯೆ ಜನರು ಭಾಗವಹಿಸುವುದಾಗಿ ತಿಳಿಸಿದರು. ಯುವ ಘಟಕದ ರಾಜ್ಯಾಧ್ಯಕ್ಷ ಕಿಚಡಿ ಕೊಟ್ರೇಶ್, ಸಮಾಜದ ಮುಖಂಡ ಪ್ರಶಾಂತ್ ಪಾಟಿಲ್ ಮಾತನಾಡಿದರು. ಮುಖಂಡರಾದ ಎ.ಹೆಚ್.ಪಂಪಣ್ಣ, ಎ.ಜಿ.ಮಂಜುನಾಥ್, ತೌಡೂರು ಚನ್ನಬಸವನ ಗೌಡ್ರು, ವಿರೂಪಾಕ್ಷಪ್ಪ,ಮಹೇಶ್ ಪೂಜಾರಿ,ಸುರೇಶ್, ಚನ್ನನಗೌಡ್ರು, ಮಹಿಳಾ ಅಧ್ಯಕ್ಷ ಶ್ರೀಮತಿ, ದೀಪಾ, ಕೊಟ್ರಮ್ಮ, ಇಟ್ಟಿಗಿಹಳ್ಳಿ ಬಸವರಾಜ್, ಅಡ್ಡಿ ಚನ್ನವೀರಪ್ಪ, ಅಜಯ್ ಕುಮಾರ್,ಪುಣಭಘಟ್ಟ ಚನ್ನಬಸಪ್ಪ, ಯರಬಳ್ಳಿ ಜಾತಪ್ಪ,ಸಮಾಜದ ಎಲ್ಲಾ ಮುಖಂಡರು ಹಾಗೂ ಮಹಿಳೆಯರು ಹಾಜರಿದ್ದರು.
“ನಮ್ಮ ಸಮಾಜದ ಸಂಘಟನೆಯ ಹಿತದೃಷ್ಟಿಯಿಂದ ಆರಂಭವಾಗಿರುವ ಹರಜಾತ್ರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೀಠದ ವಚನಾನಂದ ಸ್ವಾಮೀಜಿ ಅವರಿಗೆ ಬೆಂಬಲ ಸೂಚಿಸುತ್ತೇವೆ. ನಮ್ಮ ಸಮಾಜದ ಮಠವನ್ನು ಎತ್ತರಕ್ಕೆ ಬೆಳೆಸಿದ ಶ್ರೀಗಳ ಕಾರ್ಯ ನಮಗೆಲ್ಲಾ ಸ್ಪೂರ್ತಿಯಾಗಿದೆ.”
ಪ್ರಶಾಂತ್ ಪಾಟೀಲ್, ಸಮಾಜದ ಮುಖಂಡರು, ಅರಸೀಕೆರೆ.
Leave a comment