ಹರಪನಹಳ್ಳಿ : ಸಮ ಸಮಾಜದ ನಿರ್ಮಾಣಕ್ಕಾಗಿ ನಾಡಿಗೆ ದೊಡ್ಡ ಕೊಡುಗೆ ನೀಡಿರುವ ದಾಸ ಸಾಹಿತ್ಯ ಪ್ರಕಾರವನ್ನು ಹೆಚ್ಚು ಪ್ರಚುರಪಡಿಸುವ ಅಗತ್ಯವಿದೆ ಎಂದು ಬೆಂಗಳೂರು ಬಸವನಗುಡಿ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಪ್ರಾಚಾರ್ಯ ಪ್ರಮೋದಾಚಾರ್ಯರು ತಿಳಿಸಿದರು.
ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹರಿದಾಸರ ‘ದಾಸ’ ಪರೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹರಿದಾಸರ ಕೀರ್ತನಗಳ ಬಗ್ಗೆ ಸರ್ವಧರ್ಮೀಯರಿಗೂ ಅರಿವು ಮೂಡಿಸುವ ಮಹತ್ವ ಪಾತ್ರ ನಿರ್ವಹಿಸುತ್ತವೆ. ದೇಶದ ಸನಾತನ ಪರಂಪರೆಯನ್ನು ಹರಿದಾಸರು ತಮ್ಮ ಸಾಹಿತ್ಯ ಪ್ರಕಾರಗಳಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಸಮ್ಮ ಸನಾತನ ಪರಂಪರೆ, ಸಂಸ್ಕಾರದ ಬಗ್ಗೆ ಇಂದಿನ ಯುವ ಪೀಳಿಗೆಗೆ ಮತ್ತು ಎಲ್ಲಾ ಧರ್ಮದ ಜನಗಳಿಗೆ ತಿಳಿಸುವ ಅಗತ್ಯವಿದೆ ಎಂದರು.
ದಾಸರ ಕೀರ್ತನೆಗಳ ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ, ಇದರಲ್ಲಿ ಕೇವಲ ಬ್ರಾಹ್ಮಣ ಸಮುದಾಯ ಮಾತ್ರ ಬರೆಯುವುದಷ್ಟೆ ಅಲ್ಲ ಎಲ್ಲ ವರ್ಗದ ಜನರು ಬರೆಯ ಬಹುದಾಗಿದೆ ಎಂದು ಅವರು ತಿಳಿಸಿದರು. ಮಾಲತಿ ಮಾಳಗಿ, ವೈದ್ಯ ನಾಗೇಶ್ ಭಟ್, ವ್ಯಾಸರಾಜ್ ಟಿ, ಪರಿಕ್ಷಾರ್ಥಿಗಳಾದ ವಸಂತ, ಅನಿತಾ, ಅರುಣಾ ನಾಗೇಶ್ ಭಟ್, ಪಂಕಜಾ, ಮಾಲಾ, ಮಂಜುಳಾ, ಶಾರದಾ, ಸುಮನಾ, ಮೇಧಾವತಿ, ಸೌಮ್ಯ, ಅರ್ಚನ, ರೂಪ, ಅಪರ್ಣ ಇದ್ದರು.
Leave a comment