ಕಲಬುರಗಿ : ಜಿಲ್ಲೆಯ ಅಳಂದ್ ತಾಲ್ಲೂಕಿನ 30 ಕ್ಷಯ ರೋಗಿಗಳಿಗೆ ಇಂದು ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪೌಷ್ಟಿಕಾಹಾರ ನೀಡಲಾಯಿತು. ಕಾರ್ಯಕ್ರಮವನ್ನು ಅಳಂದ್ ತಾಲ್ಲೂಕಿನ ತಾಲ್ಲೂಕು ವೈದ್ಯಾಧಿಕಾರಿ ಡಾ. ಉಸ್ಮಾನ್ ಸುತಾರ್ ಉದ್ಘಾಟಿಸಿದರು. ನಂತರ ಮಾತನಾಡಿ ಕ್ಷಯರೋಗ ಮಾರಕ ರೋಗ ಅಲ್ಲ.
ಸರಿಯಾದ ಸಮಯದಲ್ಲಿ ಔಷಧ ತೆಗೆದುಕೊಂಡರೆ ಆರು ತಿಂಗಳಲ್ಲಿ ಸಂಪೂರ್ಣ ಗುಣಮುಖ ರಾಗ ಬಹುದು. ಇದರ ಜೊತೆಗೆ ಪೌಷ್ಟಿಕಾಹಾರ ತಿನ್ನುವ ಮೂಲಕ ಇನ್ನೂ ಬೇಗನೆ ಗುಣಮುಖ ಆಗಬಹುದು. ಸರ್ಕಾರ ಔಷಧಿ ಕೊಡುತ್ತದೆ. ಕಡಗಂಚಿಯ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ನಮ್ಮ ತಾಲೂಕಿನಲ್ಲಿ ಅನೇಕ ಜನೋಪಕಾರಿ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತದೆ.
ಇವತ್ತು ಅಳಂದ್ ತಾಲ್ಲೂಕಿನ 30 ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರವಾದ ದಿನಕ್ಕೊಂದು ಮೊಟ್ಟೆ, ಹೆಸರು ಕಾಳು ಮತ್ತು ಎರಡು ಡಬ್ಬ ಪೌಷ್ಟಿಕಾಹಾರ ನೀಡಿ ಮಾನವೀಯತೆಯನ್ನು ತೋರಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಆರೋಗ್ಯ ಇಲಾಖೆಯ ಪ್ರಯುಕ್ತ ಅನಂತ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನಂತರ ಕಾರ್ಮೆಲ್ ಜ್ಯೋತಿ ಟ್ರಸ್ಟ್ ನ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂದ ಮಾತನಾಡಿ ಅಳಂದ್ ತಾಲ್ಲೂಕನ್ನು ಕ್ಷಯರೋಗಮುಕ್ತ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ನಮ್ಮ ಎನ್.ಜಿ.ಒ. ಪ್ರಯತ್ನ ಮಾಡುತ್ತಿದೆ. ಇದಕ್ಕೆ ಕ್ಷಯ ರೋಗಿಗಳ ಸಹಕಾರ ಬೇಕು. ಈ ಕಾಯಿಲೆ ಇತರರಿಗೆ ಹರಡದಂತೆ ನೀವು ಜಾಗರೂಕತೆಯಿಂದ ಇರಬೇಕು. ಸಾರ್ವಜನಿಕರ ಜೋತೆ ಒಡನಾಟ, ಸಿಕ್ಕ ಸಿಕ್ಕ ಲ್ಲಿ ಉಗುಳುವುದು ಮಾಡಬಾರದು.
ಆದಷ್ಟು ಮಾಸ್ಕ್ ಧರಿಸಿ ಜಾಗರೂಕತೆಯಿಂದ ಇರಬೇಕು ಎಂದರು. ಕಾರ್ಯಕ್ರಮ ದಲ್ಲಿ ಸುರೇಶ್ ದೊಡ್ಡ ಮನೆ ಡಿಸ್ಟಿಕ್ ಸೂಪರ್ವೈಸರ್ ತಾಲ್ಲೂಕು ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ವಿಶಾಲ್ ಸಜ್ಜನ್,sts ರುದ್ರಮನಿ stls, ತಾಲೂಕ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳು ಗಂಗಮ್ಮ ಮಠಪತಿ LHV. ನವೀನ್ ಕುಮಾರ್. ಅಖಿಲೇಶ್ ಉಪಸ್ಥಿತರಿದ್ದರು.
- Aland
- Carmel Jyothi Public Charitable Trust
- Dr Usman Sutar
- Fr William Miranda
- Health Department
- Kadaganchi
- Kalaburagi
- Nutritional Food Distribution
- TB Patients
- Tuberculosis
- ಅಳಂದ್
- ಆರೋಗ್ಯ ಇಲಾಖೆ
- ಕಡಗಂಚಿ
- ಕಲಬುರಗಿ
- ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್
- ಕ್ಷಯ ರೋಗ
- ಟಿಬಿ ಮುಕ್ತ
- ಡಾ ಉಸ್ಮಾನ್ ಸುತಾರ್
- ಪೌಷ್ಟಿಕಾಹಾರ ವಿತರಣೆ
- ಫಾ ವಿಲಿಯಂ ಮಿರಾಂದ
Leave a comment