ಹರಪನಹಳ್ಳಿ, : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತೀಯ ಕಿಸಾನ್ ಸಂಘಟನೆಯ ಪದಾಧಿಕಾರಿಗ ಆಯ್ಕೆ ಮಾಡಲಾಯಿತು.ಈ ಸಭೆ ಕುರಿತು ಮಾತನಾಡಿದ ರಾಜ್ಯ ಅಧ್ಯಕ್ಷರಾದ ಜಿ ನಾಗರಾಜ ಮಾತನಾಡಿ ಸಂಘಟನೆಗೆ ಕೇವಲ ಒಬ್ಬರೇ ಹೋರಾಟ ಮಾಡಿದ ಡಾ,, ಬಿ ಆರ್ ಅಂಬೇಡ್ಕರ್ ಜಗತ್ತಿಗೆ ಮಾದರಿಯಾದರು ಹಾಗೆಯೇ ಮೊದಲು ಒಬ್ಬರು ನಂತರ ಇಬ್ಬರು ನಂತರ ನಾಲ್ಕರು ಜನ ಸಂಘಟನೆ ಮಾಡಿ ಮುಂದೆ ದೊಡ್ಡ ಶಕ್ತಿ ಯಾಗಿ ಹೊರ ಹೊಮ್ಮಲಿದೆ ಎಂದರು.
ಹಾಗೆಯೇ ರಾಷ್ಟ್ರೀಯ ಉಪಾಧ್ಯಕ್ಷರಾದ ಚಂದ್ರ ಕಾಂತ ರೇವಣಸಿದ್ಧ ಪಾಟೀಲ ಅವರ ಪರಿಚಯ ಸವಿಸ್ತಾರ ವಾಗಿ ವಿವರಿಸಿದರು.ನಂತರ ರಾಷ್ಟ್ರೀಯ ಉಪಾಧ್ಯಕ್ಷರಾದ ಚಂದ್ರ ಕಾಂತ ರೇವಣಸಿದ್ಧ ಪಾಟೀಲ್ ಮಾತನಾಡಿ ಈ ಸಂಘಟನೆ ರಾಷ್ಟ್ರೀಯ ಸಂಘಟನೆ ಯಾಗಿದ್ದು ರೈತ ಪರ ಹೋರಾಟ ಈ ಭಾಗದಲ್ಲಿ ಮಳೆ ಇಲ್ಲದೆ ಅಭಾವದ ಪರಿಸ್ಥಿತಿ ನಿರ್ಮಾಣ ವಾಗಿದೆ ರೈತರ ಸಂಕಷ್ಟಕ್ಕೆ ಸ್ಪಂದಿಸುವತ್ತ ನಮ್ಮ ಸಂಘಟನೆ ದ್ಯೇಯವಾಗಿದೆ ಎಂದರು.
ನಂತರ ಘೋಷಣೆ ಕೂಗುತ್ತಾ ಪಟ್ಟಣದ ಐ ಬಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿ ಮಾತನಾಡಿದ ರಾಷ್ಟ್ರೀಯ ಉಪಾಧ್ಯಕ್ಷ ಚಂದ್ರ ಕಾಂತ ರೇವಣಸಿದ್ಧ ಪಾಟೀಲ್ ಮಾತನಾಡಿ ರಾಜ್ಯ ದಲ್ಲಿ ಮಳೆ ಇಲ್ಲದೆ ಬರಗಾಲ ಬಿದ್ದಿದೆ ರೈತರ ಸಾಲ ಮನ್ನಾ ಮಾಡಿ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಇಲ್ಲ ದಿದ್ದರೆ ಮುಂದಿನ ತಿಂಗಳು ಉಪವಾಸ ಸತ್ಯಾಗ್ರಹ ಮಾಡಿ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು. ಹಾಗೆಯೇ ರಾಜ್ಯಾಧ್ಯಕ್ಷ ಜಿ ನಾಗರಾಜ್ ಅವರು ತಹಸೀಲ್ದಾರ್ ಗಿರೀಶ್ ಬಾಬು ಅವರಿಗೆ ವಿವಿಧ ಬೇಡಿಕೆಗಳ ಕುರಿತು ಮನವಿ ಪತ್ರ ಸಲ್ಲಿಸಿದರು ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ನಿಮ್ಮ ಬೇಡಿಕೆಗಳನ್ನು ಈ ಡೇರಿಸಲು ಸಂಪೂರ್ಣ ಪ್ರಯತ್ನ ಮಾಡುವೆ ಎಂಬ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರುರಾದ ಚಂದ್ರ ಕಾಂತ ರೇವಣಸಿದ್ಧ ಪಾಟೀಲ್, ರಾಜ್ಯ ಮಹಿಳಾ ಅಧ್ಯಕ್ಷರಾದ ಪೂರ್ಣಿಮಾ ಎಂ ಕೆ ಸ್ವಾಮಿ. ಶ್ರೀಮತಿ ಗೀತಾ ಎ ಕಾಂಬ್ಳೆ, ಮಮತಾಜ್, ಕೊಟ್ಟೂರು, ಜಿ ರಹಮತುಲ್ಲಾ, ಮೆಹಬುಬ್ ಸಾಹೇಬ್, ಅಶೋಕ ಎಂ, ಹಾಲೇಶ್ ಎಂ. ಸುಶೀಲ ಗೌಡ, ಸಿದ್ದಪ್ಪ ಹೊಸಮನೆ ಗುಜನೂರು, ರಮೇಶ್ ಇಟ್ಟಿಗಿ, ಭೀಮಣ್ಣ, ಸಿದ್ದನಗೌಡ ಎಸ್ ಪಿ ಕೂಡ್ಲಿಗಿ. ಕೆ ಎಸ್ ನಾಗರಾಜ್ ಹಾಗೂ ಇತರೇ ಕಾರ್ಯಕರ್ತರು ಭಾಗವಹಿಸಿದ್ದರು.
Leave a comment