ಹರಪನಹಳ್ಳಿ : ತಾಲೂಕಿನ ನಂದಿಬೇವೂರು ಗ್ರಾಮದ ಕೆಳ ವರ್ಗದ ಬಡತನ ಹಾಗೂ ಸೀಮಿತ ಸೌಲಭ್ಯಗಳ ನಡುವೆಯೂ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ನೀಟ್ ಪರೀಕ್ಷೆಯಲ್ಲಿ 99,395ನೇ ರ್ಯಾಂಕ್ ಗಳಿಸಿ, ಹುಬ್ಬಳ್ಳಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್ )ನಲ್ಲಿ ಎಂ. ಬಿ .ಬಿ .ಎಸ್ ಸರ್ಕಾರಿ ಸೀಟು ಪಡೆದ ನಂದಿಬೇವೂರಿನ ಗ್ರಾಮೀಣ ಪ್ರತಿಭೆ ದೊಡ್ಡಮನಿ ಪ್ರಜ್ವಲ್ ಹಾಗೂ ಹರಪನಹಳ್ಳಿ ಬಾಪೂಜಿ ನಗರದ ಒ.ಎಂ. ನಿತಿನ್ ಕುಮಾರ್ ಅವರನ್ನು ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ಹರಪನಹಳ್ಳಿ ತಾಲ್ಲೂಕು ಘಟಕದ ವತಿಯಿಂದ ಇವರ ಸಾಧನೆಯನ್ನು ಗೌರವಿಸಿ ಸನ್ಮಾನಿಸಿದರು.
ಈ ವೇಳೆ ಬಿ.ಜೆ.ಪಿ ಹಿರಿಯ ಮುಖಂಡರು ಹಾಗೂ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಕಣವಿಹಳ್ಳಿ ಮಂಜುನಾಥ್ ಅವರು ಮಾತನಾಡಿ ಎಸ್ಸಿ ಪಟ್ಟಿಯಲ್ಲಿ ಬರುವ ಶೋಷಿತ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸುವ ಸಲುವಾಗಿ ಎಸ್ಸಿ ಪಟ್ಟಿಯಲ್ಲಿ ಬರುವ ಎಲ್ಲಾ ವರ್ಗಗಳಿಗೆ ಸಮಾನತೆಯ ನ್ಯಾಯ ದೊರಕಲಿ ಎಂದು 2012ರಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಮಧ್ಯ ಕರ್ನಾಟಕದ ಹರಪನಹಳ್ಳಿಯಿಂದ ದಾವಣಗೆರೆವರೆಗೆ ಕರ್ನಾಟಕದಲ್ಲಿ ಪ್ರಥಮವಾಗಿ ಕಾಲ್ನಡಿಗೆ ಜಾತಾ ಮಾಡುವ ಮೂಲಕ ರಾಜ್ಯದಲಿ ಒಳ ಮೀಸಲಾತಿಯ ಗಮನ ಸೆಳೆದಿತ್ತು
ಅಂದಿನಿಂದ ಪ್ರಾರಂಭವಾದ ಹೋರಾಟ ರಾಜ್ಯದ ಉದ್ದಕ್ಕೂ ಹರಡಿ ಆಂದ್ರದ ಮಂದಕೃಷ್ಣ ಮಾದಿಗ ಅವರ ಬೃಹತ್ ಹೋರಾಟಕ್ಕೆ ಸ್ಪಂದಿಸಿ ಪ್ರಧಾನಿ ನರೇದ್ರ ಮೋದಿಜಿಯವರು ಆಂದ್ರದ ಮೀಸಲಾತಿ ಹೋರಾಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದಿಗ ಸಮಾಜಕ್ಕೆ ನ್ಯಾಯ ಕೊಡಿಸಲು ಒಪ್ಪಿದ ಮರುದಿನವೇ ಕರ್ನಾಟಕದ ಮಾದರ ಚನ್ನಯ್ಯ ಪೀಠಕ್ಕೆ ಆರ್.ಎಸ್.ಎಸ್ ನ ಮೋಹನ್ ಬಾಗವತ್, ಅಮೀತ್ ಷಾಜೀ ಎರಡು ದಿನಗಳ ಕಾಲ ಮಠದಲ್ಲಿ ತಂಗಿ ಈ ಸಮಾಜದ ಸಂಪೂರ್ಣ ಮಾಹಿತಿ ಪಡೆದು ಸಂಸತ್ತಿನಲ್ಲಿ ಚರ್ಚಿಸಿ ಸುಪ್ರೀಮ್ ಕೋರ್ಟಿನ 7ಸದಸ್ಯ ಪೀಠವನ್ನು ರಚಿಸಿ, ಪೀಠವು ಎಸ್ಸಿ ಮೀಸಲಾತಿಯನ್ನು ಆಯಾ ರಾಜ್ಯಗಳೇ ವರ್ಗಿಕರಿಸಲು ಅವಕಾಶ ಮಾಡಿಕೊಟ್ಟಿತು.
ಅದರ ಪರಿಣಾಮವಾಗಿ ರಾಜ್ಯದಲ್ಲಿ ಸಮಾಜದ ಮಠಾದೀಶರಾದ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಯವರು, ಆದಿಜಾಂಬವ ಸ್ವಾಮೀಜಿಯವರು ನೇತೃತ್ವದಲ್ಲಿ ಸಮಾಜದ ರಾಜಕರಾಣಿಗಳಾದ ಗೋವಿಂದ ಕಾರಜೋಳ, ಹೆಚ್.ಆಂಜನೇಯ, ಕೆ.ಹೆಚ್.ಮುನಿಯಪ್ಪ, ಎ.ನಾರಾಯಣ ಸ್ವಾಮಿ ಸೇರಿದಂತೆ ಅನೇಕ ಮಾದಿಗ ಸಮಾಜದ ನಾಯಕ ಮುಖಂಡರ ಅವಿರತ ಹೋರಾಟದಿಂದ ಜಾರಿಯಾದ ಒಳ ಮೀಸಲಾತಿಯ ಫಲವಾಗಿ ಕರ್ನಾಟಕದಲ್ಲಿ ಎಂ.ಬಿ.ಬಿ.ಎಸ್ ನಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆಯಾಗಿ ಆಯ್ಕೆಯಾಗಿರುವುದು ಹೋರಾಟದ ಸರ್ಥಕತೆಯಾಗಿದೆ ಆದರೆ ನಮ್ಮ ಹೋರಾಟವು ಎಸ್ಸಿ ಪಟ್ಟಿಯ ಎಲ್ಲಾ ವರ್ಗದವರ ಸಮಾನತೆಯ ನ್ಯಾಯಕ್ಕಾಗಿ ಡಾ.ಬಿ.ಆರ್ ಅಂಬೇಡ್ಕರ್ ಆಶಯದಂತೆ ಸಮಾನತೆಯ ಹೊಂದುವ ಗುರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಾದರ ಚನ್ನಯ್ಯ ಸೇವಾ ಸಮಿತಿ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ನಂದಿಬೇವೂರು ಚಾರ್ಯಪ್ಪ ಮಾತನಾಡಿದರು, ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ದೊಡ್ಡಮನಿ ಬಸವರಾಜ್, ಅಶೋಕ್, ಗಿರೀಶ್, ದೊಡ್ಡಮನಿ ಮಂಜುನಾಥ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Leave a comment