ಹರಪನಹಳ್ಳಿ : ರಾಜ್ಯ ಮುಸ್ಲೀಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಹರಪನಹಳ್ಳಿ ತಾಲ್ಲೂಕು ಸಮಿತಿ ಪುನರ್ ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಎನ್.ಇಸ್ಮಾಯಿಲ್ ಅವರು ಆಯ್ಕೆಯಾಗಿದ್ದಾರೆ.

ಜಿಲ್ಲಾಧ್ಯಕ್ಷ ಷರೀಪ್ ಮಕರಬ್ಬಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಎಸ್.ಶಫಿವುಲ್ಲಾ, ಕಾರ್ಯಾಧ್ಯಕ್ಷರಾಗಿ ಎಚ್.ಹುಸೇನ್ ಪೀರ್, ಕಾರ್ಯದರ್ಶಿಯಾಗಿ ಕೆ.ರಿಜ್ವಾನ್ ಸಾಹೇಬ್, ಖಜಾಂಚಿ ಎಚ್.ಸಲೀಂ, ಹಿರಿಯ ಉಪಾಧ್ಯಕ್ಷರುಗಳಾಗಿ ಎಂ.ಯಾಹ್ಯಾ, ಅಭಿದಾಬಾನು, ನಗೀನಬಾನು, ಸಹ ಕಾರ್ಯದರ್ಶಿಗಳಾಗಿ ಕೆ.ಜಮಾಲುದ್ದಿನ್, ಜಂಟಿ ಕಾರ್ಯದರ್ಶಿಯಾಗಿ ಮಹಮ್ಮದ್ ರಿಹಾನ್, ಸಂಘಟನಾ ಕಾರ್ಯದರ್ಶಿ ಎಚ್.ಪೀರಾ ಸಾಬ್, ಸಾಂಸ್ಕೃತಿಕ ಕಾರ್ಯದರ್ಶಿ ಇನಾಯುತ್ ಎಸ್,ಕೆ., ಕ್ರೀಡಾ ಕಾರ್ಯದರ್ಶಿ ಎಂ.ದಾದಾಪೀರ ಅವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರಾಗಿ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ಉಸ್ಮಾನ್ ಅವರನ್ನು ನೇಮಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
Leave a comment