ಹರಪನಹಳ್ಳಿ : ದಲಿತ ಜನಾಂಗ ಮಾತ್ರವಲ್ಲದೇ ಎಲ್ಲಾ ಶೋಷಿತರ ವಿಮೋಚನೆಗಾಗಿ ಶಿಕ್ಷಣ, ಸ್ವಾಭಿಮಾನ, ಸಮಾನತೆಗಾಗಿ ಹೋರಾಟ ನಡೆಸಿದ ಕೋರೆಗಾಂವ್ ಯುದ್ದದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ತಾಲ್ಲೂಕು ಅಧ್ಯಕ್ಷ ಕೆ.ಸುಭಾಷ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಆಯೋಜಿಸಿದ್ದ 208ನೇ ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತದ ಇತಿಹಾಸದಲ್ಲೇ ಹೆಸರಾದ ಕದನವೊಂದಿದ್ದರೆ ಅದು ಭೀಮ ಕೊರೆಗಾಂವ್ ಯುದ್ದ. 1818ರಲ್ಲಿ 28 ಸಾವಿರ ಮಂದಿಯ ವಿರುದ್ದ 500 ಮಂದಿ ಮಹರ್ ಸೈನಿಕರು ನಿರಂತರ 12 ಗಂಟೆ ಹೋರಾಟ ನಡೆಸಿ ಗೆಲುವು ಸಾಧಿಸಿದ ಯುದ್ದವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಕ್ ಕತ್ತರಿಸಿ ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಸ್ಮರಿಸಿದರು. ಉಪಾಧ್ಯಕ್ಷ ನಾಗರಾಜ್ ಬಿದ್ದಾಡಿ, ಡಿ.ಎಸ್.ಎಸ್. ಮುಖಂಡ ಸಂತೋಷ್ ಪುಣಬಘಟ್ಟ, ಎ.ನಾಗೇಂದ್ರಪ್ಪ, ಇಸ್ಮಾಯಿಲ್ ಎಲಿಗಾರ, ಶಶಿಧರ ಪೂಜಾರ ಮಾತನಾಡಿದರು. ಗೌರವ ಅಧ್ಯಕ್ಷ ಪೂಜಾರ ನಿಂಗಪ್ಪ, ಕಾರ್ಯದರ್ಶಿ ಡಿ.ಛತ್ರಪತಿ, ಸಹ ಕಾರ್ಯದರ್ಶಿ ಜಿ.ಶ್ರೀಕಾಂತ, ನಗರ ಘಟಕ ಅಧ್ಯಕ್ಷ ಆರ್.ಕೋಟೆಪ್ಪ, ಖಜಾಂಚಿ ಮುತ್ತಪ್ಪ ಬಿದ್ದಾಡಿ, ಪಿ.ಮಲ್ಲಿಕಾರ್ಜುನ, ಬಿ.ನಾಗರಾಜ್, ಮೈಲಾರಿ, ಡಿ.ಭರಮಪ್ಪ, ಕೆ.ಪಕ್ಕೀರಪ್ಪ, ಎ.ಪ್ರಕಾಶ ಇದ್ದರು.
Leave a comment