ಹರಪನಹಳ್ಳಿ : ಸ್ವಾರ್ಥಕ್ಕಾಗಿ ಬದುಕುವವರ ನೆನಪಿನಲ್ಲಿ ಉಳಿಯುವುದಿಲ್ಲ, ನಿಸ್ವಾರ್ಥಕ್ಕಾಗಿ ಬದುಕಿದವರು ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಇಸ್ಮಾಯಿಲ್ ಎಲಿಗಾರ ತಿಳಿಸಿದರು.
ನಗರದ ಟಿ.ಎಂ.ಎ.ಇ ಶಿಕ್ಷಣ ಸಂಸ್ಥೆ ಎಸ್.ಸಿ.ಎಸ್. ಔಷಧ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದಲ್ಲಿ ಅವರು ಯಶಸ್ಸು ವಿಷಯ ಕುರಿತು ಮಾತನಾಡಿದರು.ಹಣ , ಅಧಿಕಾರ, ದೈಹಿಕ ಶಕ್ತಿ ಪ್ರದರ್ಶನ ಮೊದಲಾದವುಗಳು ಯಶಸ್ಸು ಅಗಲಾರವು. ಇವೆಲ್ಲ ವ್ಯಕ್ತಿಗತ ಸಾಧನೆ ಗಳು. ಇವು ಬರುತ್ತವೆ ಹೋಗುತ್ತವೆ.. ಯಾರು ಸ್ವಾರ್ಥ ಕ್ಕಾಗಿ ಬದುಕಿರತ್ತಾರೋ ಇಂಥವರು ನೆನಪಿನಲ್ಲಿ ಉಳಿಯಲಾರರು. ಯಾರು ಇತರರಿಗಾಗಿ ಬದುಕಿದ್ದರೋ ಅವರೇ ಯಶಸ್ಸನ್ನು ಗಳಿಸಿದವರು. ಇದಕ್ಕೆಲ್ಲಾ ಪ್ರೇರಣೆ, ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಬಗ್ಗೆ ತಾವೇ ಗೌರವ ಹೊಂದಿರಬೇಕು. ಜೊತೆಗೆ ಕುಟುಂಬದ ಬಗ್ಗೆ , ಊರಿನ ಬಗ್ಗೆ ನಾಡಿನ ಬಗ್ಗೆ ಮತ್ತು ದೇಶದ ಬಗ್ಗೆ ಗೌರವ ತಾಳಿರಬೇಕು. ಸತತ ಪರಿಶ್ರಮ, ಬುದ್ದಿವಂತಿಕೆ , ಸೃಜನ ಶೀಲತೆ ಗುಣವನ್ನು ರೂಡಿಸಿಕೊಳ್ಳಬೇಕು. ಆತ್ಮವಿಶ್ವಾಸ ವೇ ಶಿಕ್ಷಣದ ಮೊದಲ ಮೆಟ್ಟಿಲು ಎಂದು ತಿಳಿಸಿದರು.
ಕಾರುಣ್ಯದ ಕಣ್ಣುಲ್ಲಾ ಕಾಗೆ ಪಕ್ಷಿ ಯಲ್ಲಿ ಬಳಗ ಪ್ರಜ್ಞೆ ಯನ್ನು, ಸಮಾನತೆ ಹಾಗು ಕೂಡಿ ಬದುಕುವ ಸಹಬಾಳ್ವೆ ಯನ್ನು ನಾವು ಕಾಣಬಹುದು. ಬುದ್ಧ, ಬಸವ, ಅಂಬೇಡ್ಕರ್ ಹಾಗು ಮಹಾತ್ಮ ಗಾಂಧಿ, ಎ ಪಿ ಜೆ ಅಬ್ದುಲ್ ಕಲಾಂ , ಕೆ ಆರ್ ನಾರಾಯಣ್, ಮನಮೋಹನ್ ಸಿಂಗ್ , ಭಗತ್ ಸಿಂಗ್ , ಅಬ್ರಾಹಂ ಲಿಂಕನ್ ಅವರ ಬದುಕಿನ ಕಥೆಗಳನ್ನು ವಿವರಿಸಿದರು. ಪ್ರಾಚಾರ್ಯ ನಾಗೇಂದ್ರ ರಾವ್, ಪ್ರಾಧ್ಯಾಪಕ ವೀರನಗೌಡ, ಷಣ್ಮುಖ, ಎನ್.ಎಸ್.ಎಸ್. ಅಧಿಕಾರಿ ದರ್ಶನ್ ಇದ್ದರು.
Leave a comment