ವಿಜಯನಗರ (ಹೊಸಪೇಟೆ) : 2026-27ನೇ ಸಾಲಿಗೆ ಮಕ್ಕಳ ಪಾಲನೆ ಮತ್ತು ರಕ್ಷಣೆ ಅನ್ವಯ, ಜಿಲ್ಲೆಯ ವಿವಿಧ ಕಾರಣಗಳಿಂದ ವಂಚಿತರಾದ ಮಕ್ಕಳಿಗೆ ಕುಟುಂಬದ ವಾತಾವರಣ ಒದಗಿಸುವ ಮಹತ್ವಾಕಾಂಕ್ಷೆಯ ‘ಪೋಷಕತ್ವ ಮತ್ತು ಗುಂಪು ಪೋಷಕತ್ವ’ ಕಾರ್ಯಕ್ರಮದಡಿ ಅರ್ಹ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಸರ್ಕಾರಿ ಬಾಲಮಂದಿರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ದೀರ್ಘಾವಧಿಯಿಂದ ಪುನರ್ವಸತಿಗೊಂಡು, ಪೋಷಕರು ಭೇಟಿ ನೀಡದ ಅಥವಾ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದ ಮತ್ತು ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ 07 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಪರ್ಯಾಯ ಕುಟುಂಬ ವ್ಯವಸ್ಥೆಯನ್ನು ಕಲ್ಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಮಕ್ಕಳನ್ನು ಸಾಂಸ್ಥಿಕ ಸೇವೆಗೆ ಒಳಪಡಿಸುವುದನ್ನು ತಪ್ಪಿಸಿ, ಅವರಿಗೆ ಕೌಟುಂಬಿಕ ಪ್ರೀತಿ ಮತ್ತು ಕಾಳಜಿಯನ್ನು ನೀಡುವುದು ಇದರ ಆಶಯವಾಗಿದೆ. ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಪೋಷಕರ ಸಾವು ಅಥವಾ ವಿಶೇಷ ಚೇತನವುಳ್ಳ ಹಾಗೂ ಅಪಾಯದ ಅಂಚಿನಲ್ಲಿರುವ ಮಕ್ಕಳಿಗೆ ತಾತ್ಕಾಲಿಕ ಹಾರೈಕೆ ನೀಡಲು ಇಚ್ಛಿಸುವ ವಿಸ್ತೃತ ಕುಟುಂಬದ ಸದಸ್ಯರು ಅಥವಾ ಅಸಂಬಂಧಿತ ವ್ಯಕ್ತಿಗಳು ಮತ್ತು ಕುಟುಂಬಗಳು ಅರ್ಜಿ ಸಲ್ಲಿಸಬಹುದು.
ಮಗುವಿನ ಆಗತ್ಯತೆಯ ಆಧಾರದ ಮೇಲೆ ಅಲ್ಪಾವಧಿಯ ಪೋಷಕತ್ವದಲ್ಲಿ ಆವಧಿಯು 01 ವರ್ಷಕ್ಕಿಂತ ಹೆಚ್ಚಿನ ಅವಧಿಯಾಗಿರತಕ್ಕದ್ದಲ್ಲ ಅಥವಾ ದೀರ್ಘಾವಧಿಯು ಪೋಷಕತ್ವದ ಅವಧಿಯು 01 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಇರತಕ್ಕದ್ದು, ಮಗು ಮತ್ತು ಸಾಕು ಕುಟುಂಬದ ನಡುವಿನ ಹೊಂದಾಣಿಕೆಯ ಮೌಲ್ಯಮಾಪನದ ಆಧಾರದ ಮೇಲೆ ಮಗುವಿಗೆ 18 ವರ್ಷ ತುಂಬುವವರೆಗೆ ಬಾಲನ್ಯಾಯ ಸಮಿತಿಯು ನಿಯತಕಾಲಿಕವಾಗಿ ಈ ಅವಧಿಯನ್ನು ವಿಸ್ತರಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಪ್ತಗಿರಿ ಶಾಲೆ ಹತ್ತಿರ ಬಸವೇಶ್ವರ ಬಡಾವಣೆ 16ನೇ ವಾರ್ಡ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರವಾಣಿ ಸಂಖ್ಯೆ: 08394-200091, ಮಕ್ಕಳ ರಕ್ಷಣಾಧಿಕಾರಿಗಳು ದೂರವಾಣಿ ಸಂಖ್ಯೆ: 8105603685 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Leave a comment