ಹರಪನಹಳ್ಳಿ : ತಾಲ್ಲೂಕಿನ ಬಾಗಳಿ, ಶೃಂಗಾರತೋಟ, ಹಾಗೂ ದಡಿಗಾರನಹಳ್ಳಿ ಗ್ರಾಮಗಳ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗಾಗಿ ಸಾರಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿ ಸಾರಿಗೆ ಘಟಕಕ್ಕೆ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ಸಾರಿಗೆ ಬಸ್ ನಿಲುಗಡೆ ಮಾಡಬೇಕು. ಬಾಗಳಿ, ಶೃಂಗಾರತೋಟ, ದಡಿಗಾರನಹಳ್ಳಿ, ಕಾಯಕದಹಳ್ಳಿ ಮಾರ್ಗವಾಗಿ ಹರಪನಹಳ್ಳಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಶೃಂಗಾರತೋಟ, ಬಾಗಳಿ ಹಾಗೂ ದಡಿಗಾರನಹಳ್ಳಿ ಗ್ರಾಮಗಳಿಗೆ ನಿರಂತರ ಸಾರಿಗೆ ಸಂಪರ್ಕ ಕಲ್ಪಿಸಬೇಕು. ಹರಪನಹಳ್ಳಿ-ಹೊಸಪೇಟೆ ಮಾರ್ಗದಲ್ಲಿ ಚಲಿಸುವ ಬಸ್ಗಳಿಗೆ ಗ್ರಾಮಗಳ ಸಮೀಪ ಕಡ್ಡಾಯ ನಿಲುಗಡೆ ನೀಡಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ಸೂಕ್ತ ಸ್ಥಳ ಗುರುತಿಸಿ ತಕ್ಷಣವೇ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಪ್ರಶಾಂತ, ಬಸವರಾಜ್ ಹಾಗೂ ವಿದ್ಯಾರ್ಥಿಗಳಿದ್ದರು.
- Bagali
- Bus Stop Demand
- Dadigaranahalli
- Harapanahalli
- KSRTC Bus Service
- Public Transport Issues
- Shivamogga Hospete Highway
- Shringarathota
- Sirisuddi
- Students Protest
- ಕೆಎಸ್ಆರ್ಟಿಸಿ ಬಸ್ ನಿಲುಗಡೆ
- ದಡಿಗಾರನಹಳ್ಳಿ
- ಬಾಗಳಿ
- ವಿದ್ಯಾರ್ಥಿಗಳ ಪ್ರತಿಭಟನೆ
- ಶಿವಮೊಗ್ಗ ಹೊಸಪೇಟೆ ರಾಜ್ಯ ಹೆದ್ದಾರಿ
- ಶೃಂಗಾರತೋಟ
- ಸಾರಿಗೆ ಬಸ್ ಸೌಲಭ್ಯ
- ಸುಸಜ್ಜಿತ ಬಸ್ ನಿಲ್ದಾಣ
- ಹರಪನಹಳ್ಳಿ
Leave a comment