ಹರಪನಹಳ್ಳಿ : ವಿಶೇಷಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಡತಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹರಿಹರ ಆಸರೆ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜೀವನದಿ ಸಂಜೀವಿನಿ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಕಿಟ್ ವಿತರಣೆ ಮತ್ತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೋಷಕರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು, ಬದಲಾಗಿ ಇಲಾಖೆಯ ಯೋಜನೆಗಳ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷಚೇತನ ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಕುರಿತು ಪೋಷಕರಿಗೆ ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು. ಅರ್ಹ ಅಂಗವಿಕಲ ಮಕ್ಕಳಿಗೆ ಉಚಿತ ಶಾಲಾ ಕಿಟ್ಗಳನ್ನು ವಿತರಿಸಿ, ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ತುಂಬಲಾಯಿತು.
ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎಚ್.ಬೋಜಪ್ಪ, ಕಾರ್ಯದರ್ಶಿ ನಾಗರಾಜ್, ಎಂ.ಆರ್.ಡಬ್ಲ್ಯು ಧನರಾಜು,ವಿ.ಆರ್.ಡಬ್ಲ್ಯೂ. ಗೀತಾ, ಅಲಗಿಲವಾಡ ಯೋಗೀಶ್, ಮಹಾಂತೇಶ್ ಪಾಟೀಲ್, ಸುನಿತಾ, ಪ್ರೇಮಾ ಇತರರು ಉಪಸ್ಥಿತರಿದ್ದರು.
- Asare NGO
- Free School Kit Distribution
- Govt Schemes for Disabled
- Harapanahalli
- Kadathi Gram Panchayat
- Karnataka News
- Sanjeevini Okkuta
- Sirisuddi
- Specially Abled Children
- Taluk Panchayat
- YH Chandrashekhar
- ಅಂಗವಿಕಲ ಸೌಲಭ್ಯಗಳು
- ಆಸರೆ ಸಂಸ್ಥೆ
- ಕಡತಿ ಗ್ರಾಮ ಪಂಚಾಯಿತಿ
- ಕರ್ನಾಟಕ ಸುದ್ದಿ
- ತಾಲೂಕು ಪಂಚಾಯಿತಿ
- ವಿಶೇಷಚೇತನ ಮಕ್ಕಳು
- ವೈ.ಎಚ್.ಚಂದ್ರಶೇಖರ
- ಶಾಲಾ ಕಿಟ್ ವಿತರಣೆ
- ಸಂಜೀವಿನಿ ಒಕ್ಕೂಟ
- ಹರಪನಹಳ್ಳಿ
Leave a comment