Home ಮನರಂಜನೆ ಸಾಮಾಜಿಕ ವ್ಯವಸ್ಥೆಯ ಕೈಗನ್ನಡಿ ‘ಕಳ್ಳರ ಸಂತೆ’
ಮನರಂಜನೆ

ಸಾಮಾಜಿಕ ವ್ಯವಸ್ಥೆಯ ಕೈಗನ್ನಡಿ ‘ಕಳ್ಳರ ಸಂತೆ’

Share
SANEHALLI-SHIVASANCHARA-KALLARASANTE-HARAPANAHALLI-MP RAVEENDRA
Share

ಹರಪನಹಳ್ಳಿ : ರಾಜ್ಯ ಖಜಾನೆಗೆ ಕನ್ನ ಹಾಕಲು ಬಂದಿದ್ದ ಕಳ್ಳ ಸೈನಿಕರ ಕೈಗೆ ಸಿಕ್ಕಿ ಬಿದ್ದ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಜನಿಗೆ ತನ್ನ ಆಸ್ಥಾನದಲ್ಲಿರುವ ಪ್ರತಿಯೊಬ್ಬರು ಕಳ್ಳರೇ ಎಂಬುದನ್ನು ತೋರಿಸಿದ ಕಳ್ಳರ ಸಂತೆ ನಾಟಕವು ಸಾಮಾಜಿಕ ವ್ಯವಸ್ಥೆಯ ಕೈಗನ್ನಡಿ ಪ್ರದರ್ಶಿಸಿತು.

ಹಳೇ ಬಸ್ ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನ ಕಾರ್ತಿಕಮಾಸ ನಾಟಕೋತ್ಸವದಲ್ಲಿ ಆಯೋಜಿಸಿದ್ದ ಸಾಣೆಹಳ್ಳಿ ಶಿವಸಂಚಾರ ತಂಡ ‘ಕಳ್ಳರ ಸಂತೆ’ ನಾಟಕ ಅಭಿನಯಿಸಿತು. 15ನೇ ಶತಮಾನದ ಕವಿ ವಿದ್ಯಾಪತಿ ರಚಿಸಿದ ಕಥೆಯಿಂದ ಪ್ರೇರಿತವಾಗಿ ಕೃಷ್ಣಮೂರ್ತಿ ಎನ್.ತಾಳಿಕಟ್ಟೆ ಅವರು ರಚಿಸಿದ ನಾಟಕವನ್ನು ಸಾಣೆಹಳ್ಳಿ ಶಿವಂಚಾರ ತಂಡದ ಕಲಾವಿದರು ಪ್ರದರ್ಶಿಸಿ ಗಮನ ಸೆಳೆದರು.

ರಾಜ್ಯದಲ್ಲಿ ಬರಗಾಲ ಇರುವ ಕಾರಣ, ಹಸಿವು ತಾಳಲಾರದೇ ಕಳ್ಳತನಕ್ಕೆ ಬಂದಿದ್ದ ದೊಡ್ಡಕಳ್ಳ ಕಾವಲುಗಾರರ ಕೈಗೆ ಸಿಕ್ಕಿ ಬೀಳುತ್ತಾನೆ. ನಿನ್ನಂತ ಕಳ್ಳ ಬದುಕಿರಬಾರು ಎಂದು ಕಳ್ಳನಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಿಸಲು ರಾಜಯ ಆದೇಶಿಸುತ್ತಾನೆ. ಆದರೆ ಕಳ್ಳ ಚಾಣಾಕ್ಷತನದಿಂದ ಪ್ರಾಣ ಉಳಿಸಿಕೊಳ್ಳುವ ಸಲುವಾಗ ರಾಜನ ಸುತ್ತಮುತ್ತ ಇರುವವರೆಲ್ಲರು ಕಳ್ಳರು, ಸುಳ್ಳರು, ಮೋಸಗಾರರು ಎಂಬುದನ್ನು ಬಟಾಬಯಲು ಮಾಡುವುದು  ರಂಗಾಸಕ್ತರಿಗೆ ಮನದಟ್ಟು ಮಾಡಿಕೊಡುತ್ತದೆ.

ರಾಜನ ಪಾತ್ರದಲ್ಲಿ ಸುನೀಲ ಪಾಟೀಲ್, ಮಂತ್ರಿ, ರಾಜಕಾರಣಿಗಳಾಗಿ ವಿಶ್ವಾಸರೆಡ್ಡಿ, ಜೆ.ಜನಾರ್ಧನ, ದಿನೇಶ್, ಪೊಲೀಸ್ ಆಗಿ ಜಿ.ಯಲ್ಲಪ್ಪ, ದೊಡ್ಡಕಳ್ಳನ ಪಾತ್ರಧಾರಿ ಬಸವರಾಜ ತಮ್ಮಣ್ಣ, ಸಣ್ಣಕಳ್ಳನಾಗಿ ಪ್ರಶಾಚಿತ, ಸೈನಿಕರಾಗಿ ರಾಜೇಶ್, ಸ್ವಾಮಿಯಾಗಿ ಸುಹಾಸ್, ನ್ಯಾಯಧೀಶರಾಗಿ ಸುಹಾಸ್, ಉದಯ, ಪತ್ರಕರ್ತೆಯಾಗಿ ವಿಶ್ವಜ್ಯೋತಿ, ನಾಗರತ್ನಾ ಹಿರೇಮಠ ಅವರ ಭಾವಾಭಿನಯ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಅಷ್ಟೇ ಅಲ್ಲದೇ ಪ್ರಸ್ತುತ ಸಮಾಜದ ವಾಸ್ತವ ಚಿತ್ರಣವನ್ನು ಕಟ್ಟಿಕೊಟ್ಟರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಮುಖಂಡ ಎಚ್.ಎಂ.ಮಲ್ಲಿಕಾರ್ಜುನ್, ಇಸ್ಮಾಯಿಲ್ ಎಲಿಗಾರ, ಕಣಿವಿಹಳ್ಳಿ ಮಂಜುನಾಥ, ಮೈದೂರು ಒ.ರಾಮಪ್ಪ, ಮೈದೂರು ರಾಮಪ್ಪ ಮತ್ತಿಹಳ್ಳಿ, ಸಾಸ್ವಿಹಳ್ಳಿ ನಾಗರಾಜ್, ಮತ್ತೂರು ಬಸವರಾಜ್, ಉದಯಶಂಖರ, ನಾಗಾರ್ಜುನ, ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
RAVICHANDRAN
Homeಕಲೆಮನರಂಜನೆ

 ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾ ರಾಯಭಾರಿ ವರ್ಣರಂಜಿತ, ವರ್ಣಾತಿತ ಕಲಾವಿದ

ದಾವಣಗೆರೆ: ಮನುಷ್ಯನಿಗೆ ನೆಮ್ಮದಿ ಕೊಡುವುದು ತಂದೆಯ ಹೆಗಲು, ನೆಮ್ಮದಿಯನ್ನು ಹೆಚ್ಚು ಮಾಡುವುದು ತಾಯಿಯ ಮಡಿಲು.  ರವಿಚಂದ್ರನ್...

chigateri-folk-artists-awareness-meeting
ಕಲೆಮನರಂಜನೆ

ಚಿಗಟೇರಿಯಲ್ಲಿ ಜಾನಪದ ಕಲಾವಿದರ ಜಾಗೃತಿ ಸಭೆ

ಹರಪನಹಳ್ಳಿ: ‘ಗ್ರಾಮೀಣ ಕಲಾವಿದರು ಎಂದರೆ ಹಳ್ಳಿಯ ನಾಡಿಮಿಡಿತವಿದ್ದಂತೆ. ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕಗಳು ಕೇವಲ...

ಹರಪನಹಳ್ಳಿ: ಅರಸೀಕೆರೆಯಲ್ಲಿ  'ಸಂಗ್ಯಾ ಬಾಳ್ಯ' ನಾಟಕ 
ಕಲೆಮನರಂಜನೆ

ಹರಪನಹಳ್ಳಿ: ಅರಸೀಕೆರೆಯಲ್ಲಿ  ‘ಸಂಗ್ಯಾ ಬಾಳ್ಯ’ ನಾಟಕ 

ಹರಪನಹಳ್ಳಿ: ಇತ್ತೀಚಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಗ್ರಾಮೀಣ ಭಾಗದ ನಾಟಕ...

ಕ್ರೀಡೆಮನರಂಜನೆಸುದ್ದಿಗಳು

ಕೆಂಪು ಮಣ್ಣಿನ ಕಣದಲ್ಲಿ ಪೈಲ್ವಾನರ ಜಿದ್ದಾಜಿದ್ದಿ

ವಿಜಯನಗರ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವಂತೆ, ಹಂಪಿಯ ಹೊಸಮಲಪನಗುಡಿಯ ವಿದ್ಯಾರಣ್ಯ ಪೀಠದ ಮೈದಾನದಲ್ಲಿ ಶನಿವಾರ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.