ಬಳ್ಳಾರಿ : ಬಳ್ಳಾರಿ ನಗರದ ಎಸ್ಪಿ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಿರುವ ವಾಲ್ಮೀಕಿ ಪ್ರತಿಮೆಯನ್ನು ಅಯೋಧ್ಯೆ ರಾಮನವಿಗ್ರಹ ರಚಿಸಿದ ಅರುಣ್ ಯೋಗಿರಾಜ್ ಅವರು ಸಿದ್ಧ ಮಾಡುತ್ತಿದ್ದಾರೆ.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಅವರು ಈ ಕುರಿತು ಶನಿವಾರ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಪ್ರಕಟಿಸಿದ್ದು ‘ನಮ್ಮ ಬಳ್ಳಾರಿ ನಗರದ ಎಸ್ಪಿ ಸರ್ಕಲ್ನಲ್ಲಿ ಅನಾವರಣಗೊಳ್ಳಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪ್ರತಿಮೆಗೆ ಶಿಲ್ಪಿ ಅವರು ಅಂತಿಮ ಸ್ಪರ್ಷ ನೀಡುತ್ತಿರುವ ಕ್ಷಣ’ ಎಂಬ ಬರೆದು ವಾಲ್ಮೀಕಿ ವಿಗ್ರಹ ಕೆತ್ತುತ್ತಿರುವ ಯೋಗಿರಾಜ್ ಅವರ ಪೊಟೊ ಪೋಸ್ಟ್ ಮಾಡಿದ್ದಾರೆ. ಇತ್ತ, ಅರುಣ್ ಯೋಗಿರಾಜ್ ಅವರೂ ಅದೇ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಮಹರ್ಷಿ ವಾಲ್ಮೀಕಿಗೆ ವಿನಮ್ರ ನಮನ ಸಲ್ಲಿಸುತ್ತೇನೆ. ಅವರ ಕೊಡುಗೆ ಶಾಶ್ವತವಾದದ್ದು. ಅವರ ಅಮರತ್ವವನ್ನು ಶಿಲೆಯು ಮುಂದಿನ ಪೀಳಿಗೆಗೆ ಒಯ್ಯುಲಿದೆ’ ಎಂದು ಹೇಳಿಕೊಂಡಿರುವುದು ಮಹರ್ಷಿ ವಾಲ್ಮೀಕಿ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
Leave a comment