ಹರಪನಹಳ್ಳಿ : ತಾಲ್ಲೂಕಿನ ದಂಡಿನ ದುರುಗಮ್ಮ ಜಾತ್ರೆಯಲ್ಲಿ ಮಹಿಳಾ ಸ್ವ ಸಹಾಯ ಸಂಘದಿಂದ ಮಾಸಿಕ ಸಂತೆ ಏರ್ಪಡಿಸಲಾಗಿತ್ತು.
ಆರೋಗ್ಯ ಇಲಾಖೆಯಿಂದ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 20ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ಜಾತ್ರೆ ವ್ಯವಸ್ಥಿತವಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಇಬ್ಬರು ಸಿಪಿಐ, ಏಳು ಜನ ಪಿಎಸ್ಐ, 11 ಎಎಸ್ಐ, 105 ಪೊಲೀಸ್ ಸಿಬ್ಬಂದಿ ಬಂದೋಸ್ತ್ ಗೆ ನಿಯೋಜಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ, ಪಿಡಿಒ ಮಾರುತಿ, ಸಿಪಿಐಗಳಾದ ಮಹಾಂತೇಶ್ ಸಜ್ಜನ್, ದೀಪಕ್ ಬೂಸರೆಡ್ಡಿ, ಪಿಎಸ್ಐ ವಿಜಯಕೃಷ್ಣ, ಕಿರಣ್ ಕುಮಾರ, ನಾಗರಾತ್ನ, ಭರತ್ ಕುಮಾರ, ವಾಸುದೇವ ಇದ್ದರು.
Leave a comment