ಹರಪನಹಳ್ಳಿ : ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಶುಕ್ರವಾರ ಬೆಂಕಿ ಸಂಭವಿಸಿದ ಪರಿಣಾಮ ಮೆಕ್ಕೆಜೋಳ ತೆನೆ ರಾಶಿಗಳು ಹಾಗೂ ರಾಗಿ ಮೇವಿನ ಬಣವೆಗಳು ಭಸ್ಮವಾಗಿವೆ. ವಿದ್ಯುತ್ ತಂತಿ ಶಾರ್ಟ್ ಸರ್ಕಿಟ್ ಶಂಕಿಸಲಾಗಿದೆ.

ರೈತರಾದ ಹುಲ್ಲುಮನಿ ಜಾತಪ್ಪ ಹಾಗೂ ಹುಲ್ಲುಮನಿ ನಾಗರಾಜ ಅವರಿಗೆ ಸೇರಿದ 8 ಎಕರೆ ಮೆಕ್ಕೆಜೋಳದ ತೆನೆಯ ನಾಲ್ಕು ರಾಶಿ ಹಾಗೂ 6 ಎಕರೆಯ ನಾಲ್ಕು ಮೇವಿನ ಬಣವೆಯ ರಾಶಿಗಳು ಬೆಂಕಿಗೆ ಆಹುತಿಯಾಗಿವೆ. ಕೃಷಿ ಸಾಮಾಗ್ರಿಗಳು ಕರಕಲಾಗಿವೆ. ಸ್ಥಳಕ್ಕೆ ದೌಡಾಯಿಸಿದ ಹರಡುತ್ತಿದ್ದ ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment