ಹರಪನಹಳ್ಳಿ : ಕಳಪೆ ಕಾರ್ಮಿಕ ಕಿಟ್ ವಿತರಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕರ ಪದಾಧಿಕಾರಿಗಳು ಸಾಮಾಗ್ರಿ ಸುಟ್ಟು ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಕಾರ್ಮಿಕರು ಹೆಲ್ಮೆಟ್, ಕೈಗವಸು, ಸೆಪ್ಟಿ ಜಾಕೆಟ್, ಸುರಕ್ಷಾ ಕವಚ, ಬ್ಯಾಗ್ ಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿ, ಉಪವಿಭಾಗಾಧಿಕಾರಿ ಸುರೇಶ್ ಕುಮಾರ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಕಾರ್ಯದರ್ಶಿ ಸಂತೋಷ ಗುಳೇದಹಟ್ಟಿ ಮಾತನಾಡಿ, ಕಾರ್ಮಿಕ ಇಲಾಖೆಯಡಿ ನೊಂದಾಯಿತ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಸಾಮಾಗ್ರಿ ವಿತರಿಸಿದ್ದಾರೆ. ವಿತರಣೆ ಮಾಡುವಾಗಲೂ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ದೂರಿದರು.
ರಾಜ್ಯಾಧ್ಯಂತ ಕಳಪೆ ಕಿಟ್ ವಿತರಣೆಯಲ್ಲಿ ಆಗಿರುವ ಅವ್ಯವಹಾರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಮಿಕ ನಿರೀಕ್ಷಕ ಪ್ರಕಾಶ್ ಗೌಡರ್ ಅವರೂ ಮನವಿ ಸ್ವೀಕರಿಸಿದರು. ಮುಖಂಡರಾದ ಸಂದೇರ ಪರಶುರಾಮ್, ರೆಹಮಾನ್, ರಾಮಪ್ಪ, ಖಲೀಂವುಲ್ಲಾ, ಬಾಲಚಂದ್ರ, ಗೋಣೇಶ, ಎಂ.ಕುಮಾರ ಇದ್ದರು.
Leave a comment