ಹರಪನಹಳ್ಳಿ : ಶಿವಯೋಗಿ ಸಿದ್ದರಾಮೇಶ್ವರ ಕಾಯಕ ನಿಷ್ಠೆ ಎಲ್ಲ ವರ್ಗಕ್ಕೂ ಆದರ್ಶ,ಅವರು ಸಮಾಜದ ಜನರ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಭೋವಿ ಯುವ ಸೇನೆಯ ಅಧ್ಯಕ್ಷ ಜೆ.ಪ್ರಸನ್ನಕುಮಾರ್ ಹೇಳಿದರು.
ತಾಲ್ಲೂಕಿನ ಅರಸೀಕೆರೆ ತಿಮ್ಮಲಾಪುರ ಕ್ಯಾಂಪಿನಲ್ಲಿ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರರು ಇಡೀ ಸಮಾಜವನ್ನು ವಚನಗಳ ಮೂಲಕ ತಿದ್ದುವ ಕೆಲಸ ಮಾಡಿದರು,ಅಲ್ಲದೇ ಅವರ ಬದುಕು ನಮಗೆ ಆದರ್ಶ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಭೋವಿ ಯುವ ಸೇನೆಯ ಅಧ್ಯಕ್ಷ ಜೆ.ಪ್ರಸನ್ನ ಕುಮಾರ್,ಉಪಾಧ್ಯಕ್ಷ ವಿ,ಆರ್ ಶ್ರೀನಿವಾಸ್,ಸಂತೋಷ್,ಶಶಿಧರ್,ಸಿದ್ದೇಶ್,ಹರೀಶ್,ಪ್ರಜ್ವಲ್,ಸಂತೋಷ್,ಕರಿಬಸವರಾಜ,ಲಕ್ಷ್ಮಣ್,ಪ್ರದೀಪ್,ಸುನೀಲ್,ಮತ್ತು ಅರಸೀಕೆರೆ ತಿಮಲಾಪುರ ಭೋವಿ ಗ್ರಾಮಸ್ಥರು ಇದ್ದರು.
Leave a comment