Home ರಾಮಘಟ್ಟ ದೊಡ್ಡತಾಂಡ : ಕಲ್ಲೇಶ್ವರ ಜಾತ್ರೋತ್ಸವ ಸಂಪನ್ನ
Homeಸುದ್ದಿಗಳು

ರಾಮಘಟ್ಟ ದೊಡ್ಡತಾಂಡ : ಕಲ್ಲೇಶ್ವರ ಜಾತ್ರೋತ್ಸವ ಸಂಪನ್ನ

Share
ರಾಮಘಟ್ಟ ದೊಡ್ಡತಾಂಡ : ಕಲ್ಲೇಶ್ವರ ಜಾತ್ರೋತ್ಸವ ಸಂಪನ್ನ
Share

ಹರಪನಹಳ್ಳಿ: ತಾಲ್ಲೂಕಿನ ರಾಮಘಟ್ಟ ದೊಡ್ಡ ತಾಂಡದ ಪ್ರಸಿದ್ಧ ಕಲ್ಲೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.

ಜಾತ್ರಾ ಮಹೋತ್ಸವದ ಅಂಗವಾಗಿ ತಾಂಡದ ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ತೋರಣ, ಗ್ರಾಮದ ಪ್ರಮುಖ ರಸ್ತೆಗಳು ನವವಧುವಿನಂತೆ ಶೃಂಗಾರಗೊಂಡಿದ್ದವು. ನೆರೆ ಹೊರೆಯ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.ತಾಂಡದ ಹೊರ ವಲಯದಲ್ಲಿರುವ ವಿಶಾಲವಾದ ಮೈದಾನದಲ್ಲಿ ಟೆಂಟ್ ಹಾಕಿಕೊಂಡು ಬೀಡು ಬಿಟ್ಟಿದ್ದ ಭಕ್ತರು ಹರಕೆಯ ಅಡುಗೆ ಮಾಡಿ ದೇವರಿಗೆ ಸಮರ್ಪಿಸಿದರು.

ಸೋಮವರದಿಂದಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ನೆರೆದಿದ್ದ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು. ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಕಲ್ಲೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ಹೂವಿನ ಹಾರ ಹಾಗೂ ಬಾವುಟವನ್ನು ₹89 ಸಾವಿರಕ್ಕೆ ಹಾರಾಜು ಮಾಡಲಾಯಿತು.

ತೀಜ್ ಹಬ್ಬ: ವರ್ಷದ ಮೊದಲ ಹಬ್ಬವಾಗಿ ಜಾತ್ರೆಯನ್ನು ಬಂಜಾರ ಸಮುದಾಯ ತೀಜ್ (ಗೋಧಿ ಸಸಿ) ಹಬ್ಬವಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ತಾಂಡದ ಅವಾಹಿತ ಯುವತಿಯರು ತೀಜ್ ಗಳನ್ನು ಹೊತ್ತು ಸಾಂಪ್ರದಾಯಿಕ ಉಡುಗೆ ತೊಟ್ಟು, ಗೀತೆಗಳನ್ನು ಹಾಡುತ್ತಾ ಕುಣಿದರು. ತೀಜ್ ಸಸಿಗಳನ್ನು ಹೊತ್ತ ಯುವತಿಯರಿಂದ ಕೀಳಲು ಯುವಕರು ಹೊಂಚುಹಾಕಿ ಕುಳಿತಿರುತ್ತದೆ. ಅದರ ರಕ್ಷಣೆಗೆ ಹಿರಿಯರು ನಿಂತಿರುತ್ತಾರೆ. ಅವರನ್ನು ಎದುರಿಸಿ ಯುವಕರು ಸಸಿಗಳನ್ನು ಕಿತ್ತ ಬಳಿಕ ದೇವರಿಗೆ ಅರ್ಪಿಸಿ, ಪರಸ್ಪರ ಹಂಚುವ ಮೂಲಕ ‘ ಉತ್ತಮ ಮಳೆ ಬೆಳೆ ಬಂದು ನಾಡು ಸುಭಿಕ್ಷವಾಗಲಿ ಎಂದು ಹರಸಿದರು.

ಈ ಸಂದರ್ಭದಲ್ಲಿ ಡಿ.ನುರ್ಯನಾಯ್ಕ, ಶೇಖರನಾಯ್ಕ, ಭೋಜ್ಯನಾಯ್ಕ್, ಬಿ. ಸುರೇಶ್ ನಾಯ್ಕ, ಲಿಂಬಾ ನಾಯ್ಮ, ಆರ್.ಶಂಕರ್ ನಾಯ್ಕ, ರವಿ ನಾಯ್ಕ, ಈಶ್ವರ ನಾಯ್ಕ, ಹನುಮಂತನಾಯ್ಕ, ಹಾಲೇಶ್ ನಾಯ್ಕ, ಮಲ್ಲನಾಯ್ಕ್, ವಾಲ್ಯ ನಾಯ್ಕ, ನಾನ್ಯಾನಾಯ್ಕ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.