ಬೆಂಗಳೂರು:”ನಮ್ಮದೇ ನಿಜವಾದ ಹಿಂದುತ್ವ, ಬಿಜೆಪಿದು ಕಪಟ!” ಹೀಗೆಂತ ಖಡಕ್ ಆಗಿ ಬ್ಯಾಟ್ ಬೀಸಿದ್ದಾರೆ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ. ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಭೇಟಿಯಾದ ಬಳಿಕ ಮಾತನಾಡಿದ ಅವರು, ವಿರೋಧ ಪಕ್ಷಗಳ ವಿರುದ್ಧ ಸಖತ್ ಆಗಿಯೇ ವಾಗ್ದಾಳಿ ನಡೆಸಿದ್ದಾರೆ.
“ನಾವು ದಿನಾ ದೇವರಿಗೆ ಪೂಜೆ ಮಾಡಿಯೇ ಮನೆಬಾಗಿಲು ದಾಟೋದು. ಬಿಜೆಪಿಯವರದ್ದೇನು ಸ್ಪೆಷಲ್ ಪೂಜೆನಾ? ಅವರು ಎಷ್ಟು ದೇವಸ್ಥಾನ ಕಟ್ಟಿಸಿದ್ದಾರೆ ತೋರಿಸಲಿ” ಅಂತ ಚಾಲೆಂಜ್ ಹಾಕಿದ್ದಾರೆ.
**ಡಿಕೆಶಿ ಬಾಸ್ ಅಂದ್ರೆ ಮುಗೀತು!**
ಮುಂದಿನ 2028ರ ಎಲೆಕ್ಷನ್ನಲ್ಲೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಕಾ ಅಧಿಕಾರಕ್ಕೆ ಬರುತ್ತೆ ಅನ್ನೋದು ಬೇಳೂರು ಅವರ ನಂಬಿಕೆ. ಇದೇ ವೇಳೆ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ಅವರು, “ಎರಡನೇ ಲಿಸ್ಟ್ನಲ್ಲಿ ಈಡಿಗ ಸಮುದಾಯಕ್ಕೆ ಸಿಗೋ ಕೋಟಾದಲ್ಲಿ ನನಗೂ ಮಂತ್ರಿಗಿರಿ ಸಿಗುತ್ತೆ ಅನ್ನೋ ಭರವಸೆ ಇದೆ. ಆದರೆ, ಒಂದು ವೇಳೆ ಡಿಕೆಶಿ ಸಾಹೇಬರು ಬಂದು ‘ಬೇಡ ಕಣೋ ಬೇಳೂರು, ನೀನು ಸುಮ್ಮನಿರು’ ಅಂದರೆ, ನಾನು ಯಾವುದೇ ಹಠ ಹಿಡಿಯಲ್ಲ, ಸಚಿವ ಸ್ಥಾನದ ಆಸೆಯನ್ನೇ ಬಿಟ್ಟು ಸುಮ್ಮನಾಗ್ತೀನಿ,” ಎಂದು ಸಖತ್ ಕೂಲ್ ಆಗಿ ಉತ್ತರಿಸಿದ್ದಾರೆ.
Leave a comment