ಹರಪನಹಳ್ಳಿ : ರಾಜ್ಯದಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ ಪತ್ರ ಬರಹಗಾರರ ಒಕ್ಕೂಟದ ಕಾರ್ಯಕರ್ತರು ಬುಧವಾರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಉಪ ನೋಂದಾಣಾಧಿಕಾರಿಗಳು ಹಾಗೂ ವಿವಾಹ ನೊಂದಣಿ ಇಲಾಖೆ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು, ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿದರು. ನೋಂದಾವಣೆ ಆಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲ ಬಿಕ್ಕಲಂ ಕಡ್ಡಾಯಗೊಳಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟಬೇಕು, ಪತ್ರ ಬರಹಗಾರರಿಗೆ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿ ನೀಡಬೇಕು. ಕಾವೇರಿ 0.2ರಲ್ಲಿ ಆಗಿರುವ ಆಸ್ತಿ ವಿವರಣೆಯಲ್ಲಿ ಬಡಾವಣೆ ಹೆಸರು, ಸರ್ವೆ ನಬರ್, ಸೈಟ್ ನಂಬರ್, ಡೋರ್ ನಂಬರ್ ಅಳತೆ ಇವುಗಳನ್ನು ನಮೂದಿಸಿ ನೊಂದಣಿ ಮಾಡಿಸಲಾಗುತ್ತಿತ್ತು. ಈಗ ಸರ್ಕಾರ ಅಪ್ ಲೋಡ್ ನಲ್ಲಿನೇರವಾಗಿ ಆಸ್ತಿ ವಿವರಣೆ ದಾಖಲಾಗುವಂತೆ ಮತ್ತು ಯಾವುದೇ ತಿದ್ದುಪಡಿ ಮಾಡಲು ಬಾರದಂತೆ ಮಾಡಿರುವುದು ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸಂಘದ ಅಧ್ಯಕ್ಷ ಡಂಕಿ ಇಮ್ರಾನ್, ಕೆ.ಎಂ.ರೇವಣಸಿದ್ದಯ್ಯ, ಕೆ.ಎಂ.ಲಿಂಗರಾಜ್, ಎಸ್.ಎಂ.ಮಂಜುನಾಥ, ವೆಂಕಟೇಶ್, ಎಂ.ಬಿ.ಸಿದ್ದು, ಡಂಕಿ ಮೆಹಬೂಬ್ ಸಾಬ್, ಮಂಜುನಾಥ್ ಹಾಗೂ ಸಂಘದ ಪದಾಧಿಕಾರಿಗಳಿದ್ದರು.
Leave a comment