ಹರಪನಹಳ್ಳಿ : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಕೆರೆಗುಡಿಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.
ಸೋಮವಾರ ರಾತ್ರಿ 8ಕ್ಕೆ ಕಾರ್ತಿಕ ಮಾಸದ ನಿಮಿತ್ತ ಶಿವ ಸೇರಿ ವಿವಿಧ ದೇವಾಲಯದಲ್ಲಿ ನಡೆಯುವ ವೈಭವದ ಲಕ್ಷ ದೀಪೋತ್ಸವ ಗಮನ ಸೆಳೆಯಿತು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸ್ವಾಮಿಯ ಅಡ್ಡಪಲ್ಲಕ್ಕಿ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಉತ್ಸವ ತಲುಪಿತು. ಅಭಿಷೇಕ, ಪಲ್ಲಕ್ಕಿ ಉತ್ಸವ, ಭಜನೆ ನಂದಿಕೋಲು, ಸಮಾಳ, ಡೊಳ್ಳು ಕುಣಿತ ವಾಧ್ಯಗಳು ಮೆರವಣಿಗೆಗೆ ಮೆರುಗು ನೀಡಿದವು. ಬಸವೇಶ್ವರ ಸ್ವಾಮಿಗೆ ಹೂ, ಹಣ್ಣು, ಕಾಯಿ, ಎಣ್ಣೆ, ನೈವೇದ್ಯ ಸಮರ್ಪಿಸಿದರು.
ಮುಖ್ಯಶಿಕ್ಷಕ ಪಂಡಿತರಾಧ್ಯ, ವಕೀಲರಾದ ಜಿ.ನಂದೀಶ, ಎಸ್.ಪರಮೇಶ್ವರಪ್ಪ, ಕೆರೆಗುಡಿಹಳ್ಳಿ ಹಾಲೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ, ಚಿದಾನಂದಪ್ಪ, ಜಿ.ಶೇಖರಪ್ಪ, ಎಸ್. ಬಸವರಾಜ್, ಯು.ಎಂ.ಬಸಯ್ಯ, ಕೆ.ನಾಗಪ್ಪ,ಡಿ. ಮರುಳಸಿದ್ದಪ್ಪ, ಷಡಕಪ್ಪ, ಟಿ.ಅಜ್ಜಪ್ಪ, ಕೆ.ರುದ್ರಚಾರಿ,ಬಿ.ಎಸ್. ರೇವಣಸಿದ್ಧಪ್ಪ, ಮಂಜುನಾಥ್, ಕಲ್ಲೇಶಪ್ಪ, ಎನ್.ಮಲ್ಲೇಶಪ್ಪ, ಜಿ. ಗಂಗಪ್ಪ, ಪೂಜಾರಿ ಕೊಟ್ರೇಶ್, ಮರಕುಂಟಿ ಮಂಜುನಾಥ್, ಯು. ಎಂ.ವೀರಯ್ಯ, ಜಿ.ಮಲ್ಲಿಕಾರ್ಜುನ್, ನಿವೃತ್ತ ಪಿಎಸ್ಐ ರುದ್ರಪ್ಪ, ಶಿಂಗ್ರಿಹಳ್ಳಿ ಬಸವರಾಜ್, ಜಕಣಾಚಾರಿ, ಶಿವನಾಗಪ್ಪ ಇದ್ದರು.
[the_ad_placement id=”7489″]
Leave a comment