ಹರಪನಹಳ್ಳಿ : ರೈತರು ಬೆಳೆದ ಧಾನ್ಯಗಳಿಗೆ ಆಳುವ ಸರ್ಕಾರಗಳು ಬೆಂಬಲ ಬೆಲೆ ಘೋಷಿಸಿ, ನಮ್ಮ ದೇಶದ ಬೆನ್ನೆಲುಬು ಅನ್ನದಾತನನ್ನು ರಕ್ಷಿಸಿ ಎಂದು ಪಾಂಡೊಮಟ್ಟಿ ಕಮ್ಮತ್ತಹಳ್ಳಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಡಗ್ಗಿ ಬಸಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಆಯೋಜಿಸಿದ್ದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಬಸವೇಶ್ವರ ಸ್ವಾಮಿ ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಧಾರ್ಮಿಕ ಸಭೆ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ದುಡಿದ ಹಣ ಕುಡಿತದ ಚಟಕ್ಕೆ ಬಳಕೆ ಆಗುತ್ತಿದೆ. ಇದರಿಂದ ಕಲ್ಯಾಣ ಆಗಬೇಕಿದ್ದ ಕರ್ನಾಟಕ ಕುಡುಕರ ರಾಜ್ಯವಾಗಿದೆ. ವಾಲ್ಮೀಕಿ, ಗೌತಮ ಬುದ್ದ, ಬಸವಣ್ಣ, ಗಾಂಧೀಜಿ, ಅಂಬೇಡ್ಕರಂತಹ ಮಹನೀಯರು ನಡೆದಾಡಿದ ನೆಲದಲ್ಲಿ ದುಶ್ಚಟಗಳೇ ಕಾರುಬಾರು ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಉದ್ಘಾಟಿಸಿದ ಮಾಜಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಕರ ಕುಶಲ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.
ಯೋಜನಾಧಿಕಾರಿ ಬಾಬು, ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಗುಂಡಗತ್ತಿ ಮಂಜುನಾಥ್, ಎಸ್.ಎಂ.ಶೈಲಜಾ, ಮಮತಾ, ಎಸ್.ಪವಿತ್ರಾ ಉಮಾಪತಿ, ಸಿದ್ದಮ್ಮ, ಶಂಕ್ರಪ್ಪ, ರಮೇಶ, ಕುಬೇರಪ್ಪ, ಶಂಭುಲಿಂಗಪ್ಪ, ಬಸವರಾಜ್, ಮೇಲ್ವಿಚಾರಕ ಪ್ರಶಾಂತ್, ಯರ್ರಿಸ್ವಾಮಿ, ದುರ್ಗೇಶ ಇದ್ದರು.
Leave a comment