Home ಸುದ್ದಿಗಳು ಕೊಂಗನಹೊಸೂರು, ಜಿ.ದಾದಾಪುರದಲ್ಲಿ ಮಳೆಯಿಂದ ಅನಾಹುತ
ಸುದ್ದಿಗಳು

ಕೊಂಗನಹೊಸೂರು, ಜಿ.ದಾದಾಪುರದಲ್ಲಿ ಮಳೆಯಿಂದ ಅನಾಹುತ

Share
damages konganahosuru
Share

ಹರಪನಹಳ್ಳಿ : ತಾಲ್ಲೂಕಿನ ಕೊಂಗನಹೊಸೂರು ಗ್ರಾಮದಲ್ಲಿ ಶನಿವಾರ ಸಂಜೆ ಅತಿವೇಗದ ಗಾಳಿ ಸಹಿತ ಸುರಿದ ಮಳೆಯಲ್ಲಿ ದನದ ಕೊಟ್ಟಿಗೆ ಗೋಡೆ ಕುಸಿದು ಬಿದ್ದ ಪರಿಣಾಮ ಎರಡು ಆಕಳು ಮೃತಪಟ್ಟು, 1 ಎತ್ತು ಮತ್ತು ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.

ಕಾಲುಮುರಿದು ಅಸ್ವಸ್ಥಗೊಂಡಿರುವ ಗಜಾಪುರ ಕೊಟ್ರಪ್ಪ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದಿರುವ ಗಾಯಗೊಂಡಿರುವ ನಂದಿಬೇವೂರು ಬಸವಂತಪ್ಪ ಅವರುಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಟ್ರಪ್ಪ ಅವರಿಗೆ ಸೇರಿದ ಎರಡು ಆಕಳು ಮೃತಪಟ್ಟಿದ್ದು, ಎರಡು ಕಾಲು ಮುರಿದು ಎತ್ತು ಗಾಯಗೊಂಡಿದೆ. ಕೆಲ ಕ್ಷಣದಲ್ಲಿಯೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಗ್ರಾಮಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಜೆ ಬೀಸಿದ ಭಾರಿ ವೇಗದ ಗಾಳಿಯ ಪರಿಣಾಮ ಗ್ರಾಮದಲ್ಲಿ 20ಕ್ಕೂ ಹೆಚ್ಚಿನ ಮನೆಗಳ ಮೇಲ್ಛಾವಣಿ ಗಾಳಿಯಲ್ಲಿ ಹಾರಿಹೋಗಿವೆ. 25ಕ್ಕೂ ಅಧಿಕ ವಿದ್ಯುತ್ ಕಂಬಗಳು, ಅನೇಕ ಮರಗಳು ಧರೆಗುರುಳಿವೆ. ಪಾಟೀಲ್ ಚೆನ್ನನಗೌಡ ಅವರಿಗೆ ಸೇರಿದ ರೇಷ್ಮೆ ಮನೆ ಸಂಪೂರ್ಣ ನೆಲಸಮಗೊಂಡಿದೆ. ಕೊಂಗನಹೊಸೂರು ಬಸವರಾಜ್ ಅವರ ಮನೆಯ ಮುಂದಿನ ಎರಡು ವಿದ್ಯುತ್‍ ಕಂಬಗಳು ಮುರಿದುಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಗ್ರಾಮದ ಹೊರವಲಯದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳು ಜಖಂಗೊಂಡಿವೆ. ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮದ ಜನಜೀವನ ಅಸ್ತವ್ಯಸ್ಥಗೊಂಡಿದೆ.  ಸಮೀಪದ ಬಾವಿಹಳ್ಳಿಯಲ್ಲಿ ಮೂರು ದನದಕೊಟ್ಟಿಗೆ ಮೇಲ್ಛಾವಣಿಗಳು ಮುರಿದು ಬಿದ್ದಿವೆ.

‘ ಸಂಜೆ 4 ಗಂಟೆಯ ಸಂದರ್ಭದಲ್ಲಿ ಪೂರ್ವ ದಿಕ್ಕಿನಿಂದ ಆರಂಭವಾದ ಬಿರುಗಾಳಿ ಬೀಸಿದ ರಭಸಕ್ಕೆ ಗ್ರಾಮಸ್ಥರೂ ಮನೆಯೊಳಗೆ ಸೇರಿ ರಕ್ಷಣೆ ಪಡೆದುಕೊಂಡೆವು, ಮಳೆ ಕಡಿಮೆ ಸುರಿಯಿತು ಆದರೆ ಇದಕ್ಕಿದ್ದಂತೆಯೆ ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದವು. ಸ್ವಲ್ಪ ಸಮಯದ ಬಳಿಕ ಗ್ರಾಮದಲ್ಲಿ ಆಗಿರುವ ಅನಾಹುತ ತಿಳಿಯಿತು’ ಎಂದು ಗ್ರಾಮದ ಬಸವರಾಜ್ ಮತ್ತು ಮಲ್ಲಪ್ಪ ಅವರು ಗ್ರಾಮದ ನೈಜ ಚಿತ್ರಣವನ್ನು ವಿವರಿಸಿದರು.

ಜಿ.ದಾದಾಪುರದಲ್ಲಿ ಅಸ್ತವ್ಯಸ್ತ

ಹರಪನಹಳ್ಳಿ ತಾಲ್ಲೂಕಿನ ಜಿ.ದಾದಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಬೀಸಿದ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಮನೆಗಳು ಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾಗಳ್ದ ಉಮಾಪತಿ, ಮಾಗಳ್ದ ಬಸವಂತಪ್ಪ ಅವರ‌ ಮನೆ, ಅಡಿಕೆ ತೋಟಕ್ಕೆ ಹಾನಿಯಾಗಿದೆ. ಗ್ರಾಮದ ಸಿದ್ದಪ್ಪ, ಪರಸಪ್ಪ, ಹನುಮಂತಪ್ಪ, ಆನಂದ, ಕರಡಿ ಅಶೋಕ ಅವರ ಮನೆ ಮತ್ತು ಮೇವು, ಗೋಣೆಪ್ಪ, ಮಾಗಳ್ದ ನಾಗರಾಜ್, ಜಿ.ಹನುಮಂತಪ್ಪ, ದುರುಗಪ್ಪ, ಸಿಳ್ಳೆಕ್ಯಾತರ ಈಶಪ್ಪ, ಹಾವೇರಿ ಕೆಂಚಮ್ಮ, ಹಲುವಾಗಲು ಗಂಗವ್ವ ಅವರ ಮನೆ‌ ಸೇರಿ 50ಕ್ಕೂ ಅಧಿಕ ಮನೆಗಳ ಮೇಲ್ಚಾವಣಿಯ ತಗಡುಗಳು ಮುರಿದು ಬಿದ್ದಿವೆ.  ಆರ್ ಸಿಸಿ ಮನೆಗಳಿಗೂ ಹಾನಿಯಾಗಿದೆ. ಮನೆಯೊಳಗೆ ನೀರು ನುಗ್ಗಿ ದವಸ ಧಾನ್ಯಗಳು, ಅಡುಗೆ ಸಾಮಾಗ್ರಿಗಳು ಜಲಾವೃತಗೊಂಡಿವೆ.ವಿದ್ಯುತ್ ಸಂಪರ್ಕ‌ ಕಡಿತಗೊಂಡಿದೆ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಜೂ.18 ರಂದು ಪರಿಶಿಷ್ಟ ಜಾತಿ ಜನಾಂಗದವರ ಕುಂದು-ಕೊರತೆ ಆಲಿಕೆ ಸಭೆ

ಬಳ್ಳಾರಿ : ಜಿಲ್ಲೆಯ ಪರಿಶಿಷ್ಟ ಜಾತಿ ಜನಾಂಗದವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ...

ಹರಪನಹಳ್ಳಿ ಪೊಲೀಸ್‌
Homeಸುದ್ದಿಗಳು

ಹರಪನಹಳ್ಳಿಯಲ್ಲಿ ಪೊಲೀಸರ ‘ಕಾಲ್ನಡಿಗೆ ಗಸ್ತು’

ಹರಪನಹಳ್ಳಿ : ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕಲು ನಮ್ಮ ಪೊಲೀಸ್ ಇಲಾಖೆ ಒಂದು ಸೂಪರ್...

dc hosapete
Homeಸುದ್ದಿಗಳು

ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ – ಕವಿತಾ ಎಸ್. ಮನ್ನಿಕೇರಿ ಖಡಕ್ ಎಚ್ಚರಿಕೆ

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಕುಂಠಿತಗೊಂಡಿರುವ 7ನೇ ಸಣ್ಣ ನೀರಾವರಿ ಹಾಗೂ 2ನೇ ಜಲಮೂಲಗಳ ಗಣತಿಯನ್ನು ಸರ್ಕಾರದ...

harapanahallipdo
ಸುದ್ದಿಗಳು

ಪಂಚಾಯತ್ ಇಲಾಖೆ ನೌಕರರ ಸಂಘಕ್ಕೆ ಆಯ್ಕೆ

ಹರಪನಹಳ್ಳಿ :  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಇಲಾಖೆಯ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಹಲವಾಗಲು...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.