ಹರಪನಹಳ್ಳಿ : ಜಗದ್ಗುರು ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ಬಳ್ಳಾರಿಯಲ್ಲಿ ಮಾರ್ಚ್ 23 ರಿಂದ ಮಾ.25ರ ವರೆಗೆ ಬಳ್ಳಾರಿಯಲ್ಲಿ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವೀರಶೈವ ಪಂಚಪೀಠಗಳ ಒಕ್ಕೂಟ ಸಂಚಾಲಕರು ಆಗಿರುವ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ಮಂಗಳವಾರ ನಗರದ ತೆಗ್ಗಿನಮಠದ ಸಂಸ್ಥಾನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿ ವರ್ಷ ಚೈತ್ರ ಶುದ್ದ ಪಂಚಮಿಯಿಂದ ಚೈತ್ರ ಶುದ್ದ ಸಪ್ತಮಿವರೆಗೆ ನಾಡಿನ ನಾನಾ ಭಾಗಗಳಲ್ಲಿ ಪಂಚಾಚಾರ್ಯ ಯುಗಮಾನೋತ್ಸವ ಆಚರಿಸಿದೆ ಎಂದರು. ಹಲವಾರು ಕಾರಣಗಳಿಂದ ಸ್ಥಗಿತಗೊಂಡಿದ್ದ ಯುಮಾನೋತ್ಸವಕ್ಕೆ ಮರು ಆರಂಭಿಸಲು ತೀರ್ಮಾನಿಸಲಾಗಿದೆ. ಸಂಕಲ್ಪ ಕೈಗೊಂಡಿರುವ ಪಂಚಪೀಠಗಳಾದ ಉಜ್ಜಯನಿ, ಕೇದಾರ, ಶ್ರೀಶೈಲ, ಕಾಶಿಪೀಠ ಹಾಗೂ ರಂಭಾಪುರಿ ಪೀಠ ಪೀಠಾಧ್ಯಕ್ಷರುಗಳು ಪಾಲ್ಗೊಳ್ಳುವರು. ವೀರಶೈವ ಧರ್ಮ ಸಂಸ್ಕೃತಿ ಬೆಳೆದುಬಂದ ಪರಂಪರೆ, ಸಾಮಾಜಿಕ ಚಿಂತನಾ ಮಂಥನ ಘೋಷ್ಠಿಗಳು ಯುಗಮಾನೋತ್ಸವದಲ್ಲಿ ನಡೆಯುತ್ತವೆ. ಕಾರ್ಯಕ್ರಮದ ಯಶಸ್ಸಿಗೆ ಪಂಚಾಚಾರ್ಯ ಯುಗಮಾನೋತ್ಸವ ಸೇವಾ ಸಮಿತಿ ರಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಸ್ವಾಮೀಜಿ, ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಆಡಳಿತಾಧಿಕಾರಿ ಟಿ.ಎಂ,ಚಂದ್ರಶೇಖರಯ್ಯ, ಎಂ.ಕೊಟ್ರೇಶಪ್ಪ, ಬಳ್ಳಾರಿ ಮಹಲಿಂಗಯ್ಯ, ಪ್ರಭುಸ್ವಾಮಿ, ಖೇಣಿ ಬಸಪ್ಪ, ಮೀನಹಳ್ಳಿ ಚಂದ್ರಶೇಖರ, ಬಾನಾಳ ಶೇಖರ ಇದ್ದರು.
Leave a comment